ಕವನದ ಶೀರ್ಷಿಕೆ:
"ಜೀವನ ಕಲಿಸೋ ಪಾಠ"
೧
ಮಾನವ ತಾನು ದಿನಾಲು ಗಮನಿಸುತ ನಾನಾ
ವಿಧದ ವಿನೋದವಾದ ನವೀನತರ ನಮ್ಮ ಭಾನು
ಭುವಿ,ಬಾನಿನಲಿ ನಿತ್ಯ ನೂತನ ವಿಚಾರಗಳನು
ನೋಡುತ ತನ್ನ ಆಯುಷ್ಯವನು ಕಳೆಯುವನು
ತನ್ನ ನೆಚ್ಚಿನರೊಟ್ಟಿಗೆ ಆನಂದದಿ ನಕ್ಕು ನಲಿಯುವನು
೨
ತನ್ನಲ್ಲಿ ಹಣವಿದ್ದಾಗ ಕಷ್ಟದಲ್ಲಿವರ ಗೋಳು ಗೋಳನು
ನೋಡನು ದುಃಖದಲಿ ತನ್ನವರು ಯಾರು ಯಾರು
ಸಹಾಯ ಮಾಡಲಿಲ್ಲ ಎಂದು ಕೊರಗೆ ಕೊರಗುವನು
ಇದೆ ನೋಡು ಪ್ರಕೃತಿಯು ಕಲಿಸುವ ಪಾಠ ಪಾಠ
ಅದಕೆ ಜೋಪಾನ ಮಾಡಿಕೋ ಜೀವನ ಜೀವನ
೩
ತನ್ನವರನು ನಂಬುವವ ಗೆಲ್ಲುವನು
ತನ್ನವರನು ನಂಬದಿರುವವ ಹಾಳಾಗುವನು
ತನ್ನವರು ತನ್ನ ತಿಳಿದವರು ಕಾಪಾಡುವರು
ಮರೆಯದಿರು ಸ್ಥಿರವಲ್ಲದ ಕಾಯವ ನೆಚ್ಚದಿರು
ಮರೆಯದಿರು ತನ್ನವರೇ ನಿನ್ನ ನೋಡುವರು
೪
ಯಾಕೋ ಈ ಜೀವನ ನನ್ದು ನಿನ್ದು ಎನ್ದು
ಬನ್ದು ಭಾನ್ದವರ ಬನ್ದನವ ಭಂನ್ದುತ್ವವ
ಕಳೆದು ಕೊಂಡು ಅಂನ್ದದ ಚಂನ್ದದ ಕುಂನ್ದದ
ಸನ್ಬಂಧದ ಬನ್ದಿಯಾಗಿ ನೆಡೆಯುವದು ಕಲ್ತುಕೋ
ಒನ್ದಾಗಿ ಚನ್ದಾಗಿ ಬಾಳ್ವುದೆ ಜೀವನ ಕಲಿಸೋ ಪಾಠ
ರಚನೆ:
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ||ಯಾದಗಿರಿ*
ಮೋಬೈಲ್ :8655244334
🌹 *೧೩೮ನೇ ಗೋಷ್ಠಿ*
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌻🌻
*ದಿನಾಂಕ-೨೪.೦೮.೨೦೨೦*
🌺🌺
ವಾರ- ಸೋಮವಾರ
🌸🌸
*ನಿರ್ವಹಣೆ- ಶ್ರೀಮತಿ ಸಂಧ್ಯಾರಾವ್*
🍀🍀
ಹೊಸದೊಂದು ಪ್ರಕಾರಕ್ಕೆ ತಮಗೆ ಸ್ವಾಗತ. ಹೆಸರು *ಅಲಂಕೃತ*
ಪ್ರತಿಯೊಬ್ಬರು ಒಂದು ಕವಿತೆಯನ್ನು ಬರೆಯಬೇಕು
ಅದನ್ನು ಕವನ ಸಂಕಲನ ಮಾಡಲಾಗುವುದು.ಆದರೆ ಒಬ್ಬರು ನಾಲ್ಕು ಪುಸ್ತಕಗಳನ್ನು ಕೊಂಡುಕೊಳ್ಳಬೇಕು.ಈ ಪುಸ್ತಕವನ್ನು ಬಳಗದ ಸಾಹಿತ್ಯ ಪ್ರೇಮಿಗಳಾದ *ಶ್ರೀ ಅನಿಲ್ ಆಚಾರ* ಇವರು ಪ್ರಕಾಶಕರು ಮತ್ತು ಮುದ್ರಕರು ಬೆಂಗಳೂರು
ಮುದ್ರಿಸಿ ಕೊಡಲಿದ್ದಾರೆ.ದಯವಿಟ್ಟು ಎಲ್ಲರೂ ಬರೆಯಿರಿ
*ಅಲಂಕೃತ*
ಅಲಂಕಾರಗಳಲ್ಲಿ ನಾಲ್ಕು ಅಲಂಕಾರವಿಧಾನಗಳನ್ನು ಮಾತ್ರ ಇಲ್ಲಿ ಬಳಸಲಾಗಿದೆ
*೧ ವೃತ್ತ್ಯನುಪ್ರಾಸಅಲಂಕಾರ*
ಪದ್ಯದ ಒಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಬಿಡಿಬಿಡಿಯಾಗಿ ಮತ್ತೆ ಮತ್ತೆ ಪುನರಾವರ್ತನೆ ಗೊಳ್ಳಬೇಕು
ಐದುಸಾಲಿನಲ್ಲಿ ಬಂದರೆ ಸರಿ ಆದರೆ ಕಡ್ಡಾಯವಾಗಿ ಮೂರು ಸಾಲಿನಲ್ಲಿ ಬರಲೇ ಬೇಕು
*ಭವದ ಬಂಧನದಲಿ ಬದುಕುವರು*
*ಭವ್ಯ ಬದುಕಿನ ಭರಾಟಯಲಿ*
*ಸವೆದು ಸವೆದು ಸೊರಗಿ ಹೋಗ್ವರು*
*ಮರೆತು ಮಮತೆ ಮಮಕಾರ*
*ಮರೆತು ಮಾನವ ಜನ್ಮವ*
(ಇಲ್ಲಿ ಭ,ಬ,ವ,ಸ,ಮ,ಮ ಇವು ಒಂದೇ ಸಾಲಿನಲ್ಲಿ ಮತ್ತೆ ಮತ್ತೆ ಬಳಕೆಯಾಗಿವೆ )
*೨.ಛೇಕಾನುಪ್ರಾಸಅಲಂಕಾರ*
ಪದ್ಯದಲ್ಲಿ ವ್ಯಂಜನಾಕ್ಷರಗಳಿರುವ ಪದಗಳು ಜೋಡಿಯಾಗಿ ಪುನರಾವರ್ತನೆಯಾಗುತ್ತಿರಬೇಕು
*ಕಾಡಿ ಕಾಡಿ ಕಳೆದು ಹೋಗ್ವರು*
*ಬೇಡಿ ಬೇಡಿ ಬಾಡಿಹೋಗ್ವರು*
*ಮಾಡಿ ಮಾಡಿ ಮೋಸವನು*
*ನರಳಿ ನರಳಿ ಸಾಯ್ವರು*
*ಬೇಡ ಬೇಡ ಮನುಜ ಬಾಗಿ* *ಮನುಜ*
ಇಲ್ಲಿ ಕಾಡಿ ಕಾಡಿ ಬೇಡಿ ಬೇಡಿ,ಮಾಡಿ ಮಾಡಿ ಬೇಡಬೇಡ ನರಳಿ ನರಳಿ ಹೀಗೆ ವ್ಯಂಜನಾಕ್ಷರಗಳಿರುವ ಪದಗಳು ಜೋಡಿಯಾಗಿ ಬರಬೇಕು ಐದು ಸಾಲಿನಲ್ಲಿ ಕನಿಷ್ಟ ಮೂರು ಸಾಲಿನಲ್ಲಿ ಪ್ರಯೋಗಿಸಲ್ಪಡಬೇಕು ಐದು ಸಾಲಿನಲ್ಲಿ ಬಂದರೂ ಸರಿ)
*೩.ಯಮಕಾಲಂಕಾರ*
ಮೂರು ಅಥವಾ ಮೂರಕ್ಕಿಂತ ಹೆಚ್ಚು ಅಕ್ಷರಗಳಿರು ಪದಗಳು ಪದ್ಯದ ಮೊದಲು,ಮದ್ಯ ಅಥವಾ ಕೊನೆಯಲ್ಲಿ ಮತ್ತೆ ಮತ್ತೆ ಪ್ರಯೋಗವಾಗಬೇಕು
*ಮದದಿ ಮೆರೆವರು ಮನುಜರು*
*ಮುದವಿಲ್ಲದೇ ಮದದಿ*
*ಮರೆತು ಹೋಗ್ವರು ಮದದಿಂ*
*ಮರೆತು ಮಾನವೀಯತೆಯನು*
*ಮರೆತು ಮಾನವ ಜನ್ಮವ*
ಇಲ್ಲಿ ಮದದಿ ಮತ್ತು ಮರೆತು
ಎನ್ನುವ ಪದಗಳು ಸಾಲಿನ ಮೊದಲಿಗೆ ಬಂದಿವೆ ಆದರೆ ಸಾಲಿನ ಮದ್ಯ ಮತ್ತು ಕೊನೆಯಲ್ಲೂ ಕ್ರಮಾನುಗತವಾಗಿ ಬರಬಹುದು)
*೪.ಚಿತ್ರಕವಿತ್ವ ಅಲಂಕಾರ*
ಅಕ್ಷರಗಳನ್ನು ಆರಿಸಿ ಜೋಡಿಸಿ ವೈಚಿತ್ರ್ಯ ಪೂರ್ಣವಾಗಿ ಪದಗಳನ್ನು ಮಾಡಿ ಪದ್ಯ ರಚಿಸಬೇಕು
*ಚನ್ದದನ್ದದ ಜೀವವಿದು*
*ನನ್ದೆಲ್ಲಾ ನಿನ್ದೇನಿಲ್ಲ ಎನ್ದು*
*ಅಹಂನಿಂದ* *ಮುಂನ್ದಿದೇನೆನ್ದರಿಯದೇ* *
*ಮಧಾನ್ದರಾಗಿ* *ಮರಣಿಸುವರು**
*ಮತಿಯಿಲ್ಲದೇ ಮನುಜರು*
ಇಲ್ಲಿ ಚೆಂದ ಅಂದದ ಬದಲಿಗೆ *ಚನ್ದದನ್ದದ* ,ನನ್ನದೆಲ್ಲಾ ಬದಲಿಗೆ *ನನ್ದೆಲಾ* ನಿನ್ನದೇನಿಲ್ಲಾ ಬದಲಿಗೆ *ನಿನ್ದೇನಿಲ್ಲಾ*
ಮಂದ ಬದಲಿಗೆ *ಮನ್ದ*
ಹೀಗೆ ಜೋಡಿಸಿ ಬರೆಯುವುದು ಐದು ಸಾಲಿನಲ್ಲಿ ಬಂದರೂ ಸರಿ ಆದರೆ ಕನಿಷ್ಟ ಮೂರುಸಾಲಿನಲ್ಲಿ ಬರಬೇಕು)
ಈಮೇಲಿನ ನಿಯಮದಂತೆ ಕವಿತೆ ರಚನೆಯಾಗಬೇಕು
ಐದು ಸಾಲಿನ ನಾಲ್ಕು ಪದ್ಯ ಮಾತ್ರ ಬರೆಯಬೇಕು
ಅರ್ಥಕೆಡಬಾರದು
*ಮಧುನಾಯ್ಕ.ಲಂಬಾಣಿ*
ಸರಳವಾಗಿಯೋ
ಚಿಸಿ ಬರೆಯಿರಿ
*ವೃತ್ತ್ಯನುಪ್ರಾಸದಲ್ಲಿ* ಪ್ರತಿಯೊಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು ಐದು ಸಾಲಿನಲ್ಲಿ ಬೇರೆ ಬೇರೆ ಪದ ಬರಬೇಕು
*ಛೇಕಾನುಪ್ರಾಸದಲ್ಲಿ*
ಪ್ರತಿ ಸಾಲಿನಲ್ಲಿ ವ್ಯಂಜನಾಕ್ಷರಗಳ ಜೋಡಿ ಪದ ಬಳಸಬೇಕು
ಅವು ಬೇರೆ ಬೇರೆ ಆಗಿರಬೇಕು ಅಂದರೆ ಮೊದಲ ಸಾಲಿನಲ್ಲಿ ಬಳಸಿದ ಪದವನ್ನು ಮತ್ತೊಂದು ಸಾಲಿನಲ್ಲಿ ಬಳಸಬಾರದು
*ಯಮಕಾಲಂಕಾರ* ದಲ್ಲಿ
ಮೂರು ಅಥವಾ ಮೂರಕ್ಕಿಂತ ಹೆಚ್ಚು ಅಕ್ಷರವಿರುವ ಪದವು
ಪ್ರತಿ ಸಾಲಿ ಆದಿ ಮಧ್ಯೆ ಅಂತ್ಯದಲ್ಲಾಗಲಿ ತಾವು ಎಲ್ಲಿ ಬಳಸುವಿರೋw,sww,wq,wz,qa ಅದೇ ರೀತಿಯಾಗಿ ಐದು ಸಾಲಿನಲ್ಲಿ ಬರಬೇಕು ಮೊದಲ ಸಾಲಿನಲಗಲಿ ಆದಿಯಾಗಿದ್ದರೆ ಅದು ಉಳಿದ ನಾಲ್ಕು ಸಾಲಿನಲ್ಲಿ ಆದಿಯಾಗಿರಬೇಕು ಮೊದಲಸಾಲಿನಲ್ಲಿ ಮಧ್ಯೆ ಬಳಸಿದ್ದರೆ ಅದು ಉಳಿದ ನಾಲ್ಕು ಸಾಲಿನ ಮಧ್ಯೆ ಬರಬೇಕು ಹೀಗೆ ಸಾಗಬೇಕು
*ಚಿತ್ರಕಬಿತ್ವ ಅಲಂಕಾರ* ದಲ್ಲಿ
ಅಕ್ಷರಗಳನ್ನು ಆರಿಸಿ ಜೋಡಿಸಿ ಸುಂದರವಾಗಿ ಪದರಚನೆ ಮಾಡುವುದು
ಐದು ಸಾಲಿನಲ್ಲಿ ಬಳಕೆಯಾಗಬೇಕು
ಈ ನಾಲ್ಕು ಅಲಂಕಾರದ ಪ್ರಕಾರಗಳನ್ನು ಬಳಸಿ ಇಪ್ಪತ್ತು ಸಾಲಿನ ಒಂದು ಸುಂದರ ಕವಿತೆ ಬರೆಯಬೇಕು ಅದು ಒಂದೇ ಅರ್ಥ ಕೊಡಬೇಕು
*ಮಧುನಾಯ್ಕ.ಲಂಬಾಣಿ*
No comments:
Post a Comment