Monday, August 17, 2020

ಸ್ವರಚಿತ ಕವನ ೧೬/೦೮/೨೦೨೦

 ಕವನದ ಶೀರ್ಷಿಕೆ :

"ಭಾವೈಕ್ಯತೆಯ ಬೀಡು ನಮ್ಮ ನಾಡು"


ಭಾಷೆ ವೇಷ ಭೂಷಣ ಬೇರೆ ಬೇರೆ

ಜಾತಿ ಮತಗಳು ಬೇರೆ ಬೇರೆ

ಸಂಸ್ಕೃತಿ ಸಮಾಜ ಬೇರೆ ಬೇರೆ

ವೃತ್ತಿ ಧರ್ಮಗಳು ಬೇರೆ ಬೇರೆ


ಮೇಲು ಕೀಳು ಎಂಬುದ ಬಿಡು ಬಿಡು

ಅನೇಕತೆಯಲಿ ಏಕತೆಯನು ಹಿಡಿ ಹಿಡಿ

ಮತ,ಪಂಥ, ದ್ವೇಷಗಳ ನೀ ಅಳಿ ಅಳಿ

ಶಿಕ್ಷಣದ ಜಾಗೃತಿಯ ಬೆಳೆಸು ಬೆಳೆಸು


ನದಿಗಳು ಹಲವು ಹರಿದರೂ ಕೂಡುವುದೊಂದು

ಮತಗಳು ಕೆಲವು ಇದ್ರೂ ನೀತಿ ಒಂದು

ಮಾನವರು ಅಷ್ಟು ಇದ್ರೂ ಮಾನವತೆ ಒಂದೆ

ಗಿಡಮರಗಳು ಇನಿತಿದ್ದರೂ ಗಾಳಿಯೂ ಒಂದೆ


ಮನೆ-ಮಠಗಳಲಿ ಮೂಡಲಿ ಭಾವೈಕ್ಯತೆಗೆ

ಆಚಾರ-ವಿಚಾರಗಳು ಬೆಳಗಲಿ ವೈಚಾರಿಕತೆಗೆ

ಹೊಲ-ಗಿಲಗಳು ಬೆಳೆಯಲಿ ಸಮೃದ್ಧಿಯಾಗಿ

ಊರು-ಕೇರಿಯಲಿ ಬಾಳಲಿ ರಾಮ ರಹಿಮರೊಂದಾಗಿ


ಹೆಚ್ಚು ಹೆಚ್ಚು ಬೆಳೆಯಲಿ ಜನತೆಯಲಿ ಭ್ರಾತೃತ್ವ

ಅಹಾಹಾ ಅದರ ಆನಂದಿಸಲಿ ಪ್ರೇಮಾಮೃತ

ತುತ್ತತುದಿಯನು ತಲುಪಲಿ ಕರುನಾಡು

ಹಾಗಾಗುವುದು ಭಾವೈಕ್ಯತೆಯ ಬೀಡು ನಮ್ಮ ನಾಡು


ರಚನೆ :

ಯಗುಮಾಶ

(ಶರಣಬಸ್ಸಪ್ಪ ಗುಳೇದ)




*೧೩೦ನೇ ಗೋಷ್ಠಿ* 

          🇮🇳🇮🇳🇮🇳🇮🇳

 *ಬರಹಗಾರರ ಬಳಗ ರಾಜ್ಯ** *ಘಟಕ* 

 *ಹೂವಿನಹಡಗಲಿ* 

          🇮🇳🇮🇳🇮🇳🇮🇳

 *ವಾರ-ಬಾನುವಾರ* 

          🇮🇳🇮🇳🇮🇳🇮🇳

 *ದಿನಾಂಕ-೧೬.೦೮.೨೦೨೦* 

         🇮🇳🇮🇳🇮🇳🇮🇳

ನಿರ್ವಹಣೆ   *ಶ್ರೀಮತಿ ಕಲಾಶ್ರೀ ಮ ಹಾದಿಮನಿ** 

        🇮🇳🇮🇳🇮🇳🇮🇳

 *ವಿಷಯ-ಭಾವೈಕ್ಯತೆ** 

         🇮🇳🇮🇳🇮🇳🇮🇳

೧)ಕವಿತೆ ೧೬ ರಿಂದ ೨೫ ಸಾಲಿರಲಿ

೨)ಸಮಯ ಮುಂಜಾನೆ ಎಂಟರಿಂದ ಆರರವರೆಗೆ ಮಾತ್ರ ಹಾಕಿ ನಂತರದ ಅಥವಾ ಮುಂಚೆ ಹಾಕುವ ಕವನಗಳನ್ನು ಪರಿಗಣಿಸುವುದಿಲ್ಲ

೩)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು

೪)ನಿಮ್ಮ ಕವನಗಳನ್ನು ವಾಟ್ಸಾಪ್ ಬರಹದಲ್ಲಿಯೇ ಬರೆದು ಹಾಕಬೇಕು

೫)ಯಾವುದೇ ಕಾರಣಕ್ಕೂ ಬೆರೆಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತಗೆಯಲಾಗುವುದು 

🙏🙏🙏🙏🙏🙏🙏🙏


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



No comments:

Post a Comment

Videos