Wednesday, August 26, 2020

ಸ್ವರಚಿತ ಕವನ ೨೬/೦೮/೨೦೨೦

 *೧೪೦ನೇಗೋಷ್ಠಿ*

                  🍀🍀

ಬರಹಗಾರರ ಬಳಗ ರಾಜ್ಯ ಘಟಕ

         ಹೂವಿನಹಡಗಲಿ

                  🌸🌸

     ದಿನಾಂಕ-೨೬.೦೮.೨೦೨೦

                  🌹🌹

          ವಾರ- ಬುಧವಾರ

                  🌼🌼

           ಕವನದ ಶೀರ್ಷಿಕೆ-ಪ್ರವಾಹ

                 (ಅಂತ್ಯಪ್ರಾಸ)

                      🌿🌿

ಜಲ ಪ್ರಳಯವಾದಾಗ ಎಲ್ಲೆಲ್ಲೂ ಆಕ್ರಂದನದಿ

ಅಬ್ಬರಿಸುವವು ಪ್ರಾಣಿಗಳು, ಪಕ್ಷಿಗಳು ನೆಲೆ ಇಲ್ಲದೆ

ಮನೆ-ಮಠ ಕಳೆದುಕೊಂಡವರ ಗೋಳು ನೋಡಲಾಗದು ಮನೆಯಲ್ಲಿ ಧಾನ-ಧರ್ಮ ಮಾಡಿದ ಕೈ ಕಾಣದು

ಒಂದೊತ್ತಿನ ಊಟ,ವಸ್ತ್ರ ಆಗ ಅರ್ಥವಾಗೋದು

ಜೀವ ಜೀವನದ ಬೆಲೆ ಈ ಹಾಳು ಪ್ರವಾಹದಿಂದ


ಜಗದಲಿ ಹಲವು ಪ್ರವಾಹಗಳ ನೋಡುತ್ತೇವೆ

ಜೀವನದಲಿಯ ಪ್ರವಾಹ ಸದಾ ಹರಿಯುತ್ತವೆ

ಸೂತ್ರವೆಂಬ ದಾರ ಕೈಗೆ ಸಿಗದೆ ಓಡುತ್ತಿವೆ

ಗಾಳಿಯು ಅದಕ್ಕೆಲ್ಲ ದಿಕ್ಕು ತಪ್ಪಿಸುತ್ತಿವೆ

ಒಯ್ದಾಟ ಒದ್ದಾಟಗಳ ನಡುವೆ ಸಾಗುತ್ತಿವೆ

ಜೀವನದಲಿ ಗೆಲ್ಲುಲು ಬೇಕು ಸಂಸಾರದ ಹಿಡಿತವ


ಸಿರಿತನದ ಸುಪ್ಪತ್ತಿಗೆಯನು ನೀ ನೆಚ್ಚದಿರು

ಮನುಜ ಶಾಶ್ವತವಲ್ಲದ ಜೀವನವ ಮರೆಯದಿರು

ಯಾವಾಗ ಬಿರುಗಾಳಿ ಬೀಸುವುದೋ ಹೆದರಿ

ಅಂಜಿಕೆಯ ಬಲೆಯಲಿ ದೊಪ್ಪನೆ ಬೀಳದಿರು

ನಿನ್ನಲ್ಲಿ ಇರುವತನಕ ಹಂಚಿಕೊಂಡು ತಿಂದು ಜನರ

ಕಷ್ಟಕೆ ಭಾಗಿಯಾಗಿ ಜೀವನ ಪ್ರವಾಹಕೆ ಮಾಡು ಪ್ರಹಾರ


ರಚನೆ:

ಯಗುಮಾಶ

*ಶ್ರೀ ಶರಣಬಸ್ಸಪ್ಪ ಗುಳೇದ*


              


*೧೪೦ನೇಗೋಷ್ಠಿ*
                  🍀🍀
ಬರಹಗಾರರ ಬಳಗ ರಾಜ್ಯ ಘಟಕ
         ಹೂವಿನಹಡಗಲಿ
                  🌸🌸
     ದಿನಾಂಕ-೨೬.೦೮.೨೦೨೦
                  🌹🌹
          ವಾರ- ಬುಧವಾರ
                  🌼🌼
           ವಿಷಯ-ಪ್ರವಾಹ
              (ಅಂತ್ಯಪ್ರಾಸ)
                 🌿🌿
              ನಿರ್ವಹಣೆ
         ಶ್ರೀ ಜ್ಯೋತಿನಾಯ್ಕ

*ಅಂತ್ಯಪ್ರಾಸ*(ಷಟ್ಪದಿ)

ಪದ್ಯದ ಪ್ರತಿ ಚರಣದ (ಸಾಲಿನ) ಕೊನೆಯ ಅಕ್ಷರ ಒಂದೇ ಆಗಿರಬೇಕು
 
*ಉದಾಹರಣೆ*

ನೀನಿರುವ ಮನೆಯಲ್ಲಿ ಹೊನ್ನ ದೀವಳಿಗೆ
ನನ್ನ ಮನಸ್ಸಿನ ತುಂಬ ನಿನ್ನ ನೆನಪಿನ ಮೆರವಣಿಗೆ.

ಗೆ...ಗೆ ಹೀಗೆ ಅರು ಸಾಲಿಗೂ ಗೆ
 ಬರುವಂತೆ ನೋಡಿಕೊಳ್ಳಬೇಕು
ಜೊತೆ ವಿಷಯ ವಿವರಿತವಾಗಬೇಕು
೧.ಆರು ಸಾಲಿನ ಪದ್ಯ ಎರಡು ಅಥವಾ ಮೂರು ಪದ್ಯ ಬರೆಯಿರಿ
೨.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
              🙏🙏🙏
 *ಮಧುನಾಯ್ಕ.ಲಂಬಾಣಿ*
 *ಬ.ಬ.ರಾ.ಘ.ಹೂ.ಹಡಗಲಿ*


No comments:

Post a Comment

Videos