Monday, August 17, 2020

ಸ್ವರಚಿತ ಕವನ ೧೫/೦೮/೨೦೨೦

 ಉತ್ತಮ ಬರಹಗಾರ ಪ್ರಶಸ್ತಿ 


"ಸ್ವಾತಂತ್ರ್ಯ ಸಂಭ್ರಮ"


ಭಾರತ ಮಾತೆಯ ಮಮತೆಯ ಮಕ್ಕಳು

ಮರ ಮರುಗುವ ಕಾಲ ಬಂದಿತಲ್ಲ

ಕನಸು ಮನಸಲಿ ಬಯಸಿರಲಿಲ್ಲ ಜನ

ಮಹಾ ಮಾರಿ ಕರೋನಾ ಕದಡಿತು ಮನ


ಈ ಮಾಯೆಯ ಕರೋನಾ ಛಾಯೆ

ತೊಲಗಿ ಹೋಗಲು ಒದ್ದೋಡಿಸಿ ತಾಯೆ

ಸ್ವಾತಂತ್ರ್ಯ ಸಂಭ್ರಮ ಅನುಭವಿಸಲು

ಮಕ್ಕಳ ಅಕ್ಕರೆಯನು ನೋಡಲು


ಸ್ವಾತಂತ್ರ್ಯೋತ್ಸವ ಹಬ್ಬದಿ ಜನ

ಸಂಭ್ರಮಕೆ ಕವಿದಿದೆ ಕಾರ್ಮೋಡ

ಅಬಾಲ ವೃದ್ಧರಾದಿಯಾಗಿ ಉತ್ಸಾಹಕ್ಕೆ

ಹಾತೊರೆದು ಮನೆ-ಮನದಲ್ಲಿ ಆಚರಿಸೋಣ


ಭಾರತಾಂಬೆಯೇ ಭವ್ಯ ಜನತೆಗೆ

ಇದ್ದಲ್ಲಿಯೇ ಸಂಭ್ರಮಿಸಲು ಆರೈಸು

ಸ್ವಾತಂತ್ರ್ಯದಿ ಜನ ಸ್ವಚ್ಛಂದವಾಗಿ

ಆಚರಿಸಲಿ ಮನೆ ಮಕ್ಕಳೊಂದಿಗೆ ಜನ


ರಚನೆ

ಯಗುಮಾಶ

(ಶರಣಬಸ್ಸಪ್ಪ ಗುಳೇದ)

No comments:

Post a Comment

Videos