ಕವನದ ಶೀರ್ಷಿಕೆ:
"ಶಕ್ತಿಗಿಂತ ಯುಕ್ತಿ ಮೇಲು"
ಮಂಗನಿಂದ ಮಾನವನೆಡೆಗೆ
ಸಾಗಿದೆ ಸಹಸ್ರಾರು ವರ್ಷಗಳ ಇತಿಹಾಸ
ಕಲಿಯುಗದಲ್ಲಿ ನಡೆಯುತ್ತಿದೆ ಹತ್ತೆಂಟು
ಯೋಚನೆ ಶಕ್ತಿಗಿಂತ ಯುಕ್ತಿ ಮೇಲೆಂಬಂತೆ
ಆಧುನಿಕತೆಯ ಭರಾಟೆಯಲ್ಲಿ ಸಾಗಿದೆ
ಇಪ್ಪತ್ತೊಂದನೆಯ ಶತಮಾನದೆಡೆಗೆ
ಕಡಿಮೆಯಾಗುತ್ತಿದೆ ಮಾನವೀಯ
ಮೌಲ್ಯಗಳು ಲಕ್ಷಾಂತರ ಮನುಜರಲಿ
ಮಾನವ ಭೂಮಿಯಿಂದಬಾನಿಗೆ
ಜಿಗಿದನು ನವಗ್ರಹಗಳ ಮಾಹಿತಿ
ಅರಸಲು ಮಂಗನ ಅಂಗಳಕೆ
ಕಳುಹಿಸಿದ ಹತ್ತಾರು ಉಪಗ್ರಹಗಳನು
ಸಂಶೋಧನೆ ಮಾಡಿದನು ತನ್ನಂತೆ
ಇರುವ ನೂರಾರು ಕೃತಕ ಮನುಜರನು
ನೆಲ,ಜಲ, ಆಕಾಶದಲ್ಲಿ ಹೋರಾಡುವ
ದಶಲಕ್ಷ ಯುದ್ಧೋಪಕರಣಗಳನ್ನು
ಆದರೆ ಜಗದಲಿ ಆವರಿಸಲಿ ಕೋಟಿ ಕೋಟಿ
ಮನುಜರನು ಮನುಜರಾಗಿ ನೋಡುವುದನು
ತೂರದಿರು ಗಾಳಿಗೆ ಸಂಬಂಧಗಳ ಬೆಲೆಯನು
ಮೌಲ್ಯಗಳು ಉಳಿಯಲಿ ನೂರಾರು ವರ್ಷಕಾಲ
ರಚನೆ:
ಯಗುಮಾಶ
(ಶರಣಬಸಪ್ಪ ಗುಳೇದ)
🌹 *೧೩೪ನೇ ಗೋಷ್ಠಿ*🌹
🌷🌷🌷🌷🌷🌷🌷🌷🌷🌷🌷
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌼🌼🌼🌼🌼🌼🌼🌼🌼🌼🌼
*ವಾರ-ಗುರುವಾರ*
💐💐💐💐💐💐💐💐💐💐💐
*ದಿನಾಂಕ-೨೦.೦೮.೨೦೨೦*
🌺🌺🌺🌺🌺🌺🌺🌺🌺🌺🌺 *ನಿರ್ವಹಣೆ - ಶ್ರೀ ಗಿರೀಶ್ ಪೂಜಾರ್. ಹೊಳಗುಂದಿ*
🌻🌻🌻🌻🌻🌻🌻🌻🌻🌻🌻
*ವಿಷಯ - ಯುಕ್ತಿ (ಸಂಪ ಪ್ರಕಾರ)*
✍️✍️✍️✍️✍️✍️✍️✍️✍️✍️✍️
*ಸಂಪ ಸಾಹಿತ್ಯದ ನಿಯಮಗಳು*
೧)ಇದು ಒಂದು ಹೊಸವಿಷಯ ಎಲ್ಲೂ ಸಿಗುವುದಿಲ್ಲ.ನಾವು ನಮ್ಮ ಕಲಿಕೆಗಾಗಿ ತಯಾರಿಸಿಕೊಂಡ ವಿಧಾನ
೨) *ಸಂಪ* ಎಂದರೆ ಸಂಖ್ಯಾ ಪದ ಎಂದು
೩)ಪ್ರತೀ ಕವಿತೆಯ ಯಾವುದಾದರೂ ಎರಡು ಸಾಲಿನಲ್ಲ ಸಂಖ್ಯಾ ಸೂಚಕ ಪದ ಬಳಕೆಯಾಗಬೇಕು.
🌷🌷🌷🌷🌷🌷🌷🌷🌷🌷🌷
*ಬಳಗದ ನಿಯಮಗಳು*
೧)ಸಮಯ ಮುಂಜಾನೆ ಎಂಟರಿಂದ ಆರರ ವರೆಗೆ.
೨)ನಿಮ್ಮ ಕವನಗಳನ್ನು ವಾಟ್ಸಪ್ ಬರಹದಲ್ಲಿಯೇ ಹಾಕಬೇಕು.
೩)ಕವನದ ಕೊನೆಯಲ್ಲಿ ತಮ್ಮ ಹೆಸರನ್ನು ನಮೋದಿಸಿ.
೪)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು.
೫) ರಾಜಕೀಯ ಮತ್ತು ವ್ಯಕ್ತಿಗತ ಕವಿತೆಗಳು ಬೇಡಾ.
೬) ಯಾವುದೇ ಕಾರಣಕ್ಕೂ ಬೇರೆ ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ. ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತೆಗೆಯಲಾಗುವುದು.
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment