*೧೪೩ ನೇಗೋಷ್ಠಿ*
🌷🌷🌷
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌸🌸🌸
*ದಿನಾಂಕ-೨೯.೦೮.೨೦೨೦*
🌻🌻🌻
*ವಾರ-ಶನಿವಾರ*
🍀🍀🍀
ವಿಷಯ-ಕಾಮನಬಿಲ್ಲು*
*(ವೃಷಭಪ್ರಾಸ)*
🌼🌼
೧
ಕಂದನ ಸಂತಸಪಡಿಸಲು ಆತುರದಿಂದ
ಚಂದಿರನ ಕರೆಯಲು ಬಂದಂತೆ ಕಂಡಿತು
ಅಂದವಾದ ಆಕಾಶದಿ ಕಂಗೊಳಿಸುವ
ಸುಂದರ ಕಿರಣವು ಮನವ ಸೆಳೆವುದು
ಗಂಧವ ಚಲ್ಲಿಹದು ಆಕಾಶದ ಅಗಲಕೆ
ಸಂದಿರುವ ಕಾಮನ ಬಿಲ್ಲಲಿ ಏಳು ಬಣ್ಣಗಳು
೨
ಇಂಚಿಂಚು ಬಿಡದೆ ಕಾಮನ ಬಿಲ್ಲಿನ
ಸಂಚನು ತಿಳಿಸುವೆ ಜನರಿಗೆ ನಿನಗಿಂತ
ಮುಂಚೆ ಎನ್ನುತ ವೇಗದಿಂದಲೆ ಧಾವಿಸಿ
ಸಂಚರಿಸಿ ಬಂದು ಜನರ ಮನಸನು ಗೆದ್ದು
ಚುಂಚನು ಚಾಚಿದೆ ಭುವಿ ಆಕಾಶದ ಕಡೆಗೆ
ಚಂಚಲ ಬಿಟ್ಟು ಕಾಮನ ಬಿಲ್ಲನು ನೋಡುವರು
೩
ಅಂಬರದಿ ನೇಸರನ ಬೆಳಕು ಪಡೆದು
ಅಂಬುವನು ಬಾನಂಗಳದಿ ಮೂಡಿದೆ
ಬೆಂಬೆತ್ತಿ ಬಿಡದೆ ನೋಡುವರು ಭೂಜನರು
ಕಂಬದ ಮೇಲೇರಿ ನೋಡಲು ಸಿಗುವುದು
ಎಂಬ ಭ್ರಮೆಯಲಿ ಇರುತ ಮಕ್ಕಳು
ಸಂಭ್ರಮಗೊಳ್ಳಲು ಕಾಮನ ಬಿಲ್ಲು ಮುಳುಗುವದು
ರಚನೆ :
ಯಗುಮಾಶ
*ಶರಣಬಸಪ್ಪ ಎಂ ಗುಳೇದ*
*೧೪೩ ನೇಗೋಷ್ಠಿ*
🌷🌷🌷
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌸🌸🌸
*ದಿನಾಂಕ-೨೯.೦೮.೨೦೨೦*
🌻🌻🌻
*ವಾರ-ಶನಿವಾರ*
🍀🍀🍀
*ವಿಷಯ-ಕಾಮನಬಿಲ್ಲು*
*(ವೃಷಭಪ್ರಾಸ)*
🌼🌼🌼
*ನಿರ್ವಹಣೆ*
*ಶ್ರೀ ಹರೀಶ ಕಜೆ*
೧.ಆರು ಸಾಲಿನ ಪದ್ಯ ಪ್ರತಿಸಾಲಿನ ಪ್ರಾಸ ಅಕ್ಷರದ ಹಿಂದಿನ ಅಕ್ಷರ ಅನುಸ್ವಾರ ಬರಬೇಕು
*ವೃಷಭಪ್ರಾಸ*(ಷಟ್ಪದಿ)
ಪ್ರಾಸ ಅಕ್ಷರದ ಹಿಂದೆ ಅಂದರೆ ಆದಿಪ್ರಾಸದ ಹಿಂದಿನ ಅಕ್ಷರ
ಅನುಸ್ವಾರವಿರಬೇಕು
*ಉದಾಹರಣೆ*
ಸಂದಕಾರಿರುಳು
ತಿಂದು ಬಂದರು..
ಇಲ್ಲಿ *ದ* ಪ್ರಾಸಾಕ್ಷರ
ಇದರ ಹಿಂದಿನ ಅಕ್ಷರ. ಂ ಅನುಸ್ವಾರ ಬರಬೇಕು
ಅಂ ಸಂ,ತಿಂ,ಎಂ,ಕೊಂ,ಲಂ,ಹಂ
ಕಂ,ಮಂ,ನಿಂ,ಗೆಂ,ಡಂ,ಪಂ,ವಂ
ದಂ,ಚಂ,ವೆಂ,ಸೆಂ,ಡಂ,ಟಂ,ಬೆಂ
ಗಂ,ನೆಂ,ಮೆಂ ,ರಂ,ರೊಂ,ಗೊಂ
ರಂ,ತೊಂ,ಜೊಂ,ಹೀಗೇ ಬರಬೇಕು
೨.ಕೊಟ್ಟ ವಿಷಯಕ್ಕೆ ಪೂರಕವಾಗಿರಬೇಕು
೩.ಆರು ಸಾಲುಗಳ ಪದ್ಯ ಮೂರು ಪದ್ಯ ಬರೆಯಿರಿ
೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
ಕವನದ ಶೀರ್ಷಿಕೆ :
"ಭಾವೈಕ್ಯತೆಯ ಮೊಹರಂ"
ಚಂದಿರನು ಕಂಡಾಗ ಗುದ್ದಲಿಯನು ಹಾಕುವರು
ಅಂದಿನಿಂದ ಹಬ್ಬದ ಸಡಗರವು ಒಡಮೂಡುವುದು
ಗಂಧದ ಕಡ್ಡಿ,ಲೋಭಾನ ಹಾಕುವರು ಪಂಜಾಗಳಿಗೆ
ಹಿಂದುಗಳು ಅನೇಕರು ಫಕೀರರಾಗುವರು
ಒಂದಾಗಿ ಕುಣಿಯುತಲಿ ಹಿಂದು ಮುಸ್ಲಿಂರು
ಚಂದದ ಸಡಗರ ನಡೆವದು ಹತ್ತು ದಿನಗಳವರೆಗೆ
ಶೋಕಾಚರಣೆಯು ಹಬ್ಬದ ಮೂಲವಾದರೂ
ಸಕಲ ಹಿರಿ-ಕಿರಿಯರು ಸಂಭ್ರಮಿಸುವರು
ಮಕ್ಕಳು ಗಂಡಸರು ಹಲಾವಿ ಕುಣಿದರೆ
ಐಕಳು ಹೆಂಗೆಳೆಯರು ಉಯ್ಯಾಲೆ ಆಕುವರು
ಜೈಕಾರ ಹಾಕುತ್ತಾ ಪಂಜಾ ಹೊರುವರ ನಮಿಸಿ
ಕೇಕೆಯಾಕುತ ನಲಿದು ಕುಣಿದು ಕುಪ್ಪಳಿಸುವರು
ಹಾಡುವರು ಮೊಹರಂ ಪದಗಳನು
ಬೇಡುವರು ಕೈಮುಗಿದು ವರವನು
ಕೊಡಲಿ,ಸುರಾಯಿ,ಕೋಲು ಹಿಡಿದು ಕುಣಿದು
ಕುಡಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸುವರು
ಸಡಗರದಿ ಊರು ತುಂಬೆಲ್ಲ ಮೆರವಣಿಗೆ
ಮಾಡುತ ಭಾವೈಕ್ಯತೆಯ ಮೊಹರಂ ಆಚರಿಸುವರು
ರಚನೆ :
ಯಗುಮಾಶ
*ಶರಣಬಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ|| ಯಾದಗಿರಿ*
No comments:
Post a Comment