Thursday, August 27, 2020

ಸ್ವರಚಿತ ಕವನ 27/08/2020

 *೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 

ಸಾಮಾನ್ಯವಾಗಿ ಮನಸನು ಮರ್ಕಟ ಎಂಬರು

ಸೀಮೆ ಎಂಬುದಿಲ್ಲ ಇದರ ಮಾಯಾ ಬಜಾರಕೆ

ಮಾಮರದ ಕೊಂಬೆಯಲಿ ಒಂದು ಕ್ಷಣವಿದ್ದರೆ

ಸಾಮ್ರಾಜ್ಯದ ಅರಸನಾಗುವ ಕನಸು ಕಾಣುತ್ತಾ

ಸಾಮಂತರೊಂದಿಗಿನ ಒಡನಾಟ ಒಂದೆಡೆ

ಸಾಮಾನ್ಯ ಪ್ರಜೆಗಳೊಡನೆ ಬೆರೆಯುವ ಆತುರಬೇರೆ


ಸಾಕು ಸಾಕಾಗಿ ಹೊಯ್ತು ಈ ಮನಸಿನ ಬಗೆಗೆ

ಕಾಕುತ್ಸ ಬುದ್ಧಿಯ ಬಿಡಲೊಲ್ಲದು ಈ ಮನವು

ಕ್ಯಾಕರಿಸಿ ಉಗಿದರು ಬುದ್ಧಿಯ ಬಾರದು ಇದಕೆ

ತಾಕಲಾಟವ ಮಾಡುವುದು ತಕರಾರು ತೆಗೆವದು

ಟೀಕು ಪಾಕು ಮಾತಲಿ ಮರುಳ ಮಾಡಿದೆ ಜನಕೆ

ತಾಕುವ ಮನಸನು ನಿಗ್ರಹಿಸಿದರೆ ಕುನ್ನಿಯಂತೆ ಬೀಳುವುದು


ರಚನೆ :

ಯಗುಮಾಶ

*ಶರಣಬಸಪ್ಪ ಗುಳೇದ*








            



*೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 

ಸಾಮಾನ್ಯವಾಗಿ ಮನಸನು ಮರ್ಕಟ ಎಂಬರು

ಸೀಮೆ ಎಂಬುದಿಲ್ಲ ಇದರ ಮಾಯಾ ಬಜಾರಕೆ

ಮಾಮರದ ಕೊಂಬೆಯಲಿ ಒಂದು ಕ್ಷಣವಿದ್ದರೆ

ಸಾಮ್ರಾಜ್ಯದ ಅರಸನಾಗುವ ಕನಸು ಕಾಣುತ್ತಾ

ಸಾಮಂತರೊಂದಿಗಿನ ಒಡನಾಟ ಒಂದೆಡೆ

ಸಾಮಾನ್ಯ ಪ್ರಜೆಗಳೊಡನೆ ಬೆರೆಯುವ ಆತುರಬೇರೆ


ಸಾಕು ಸಾಕಾಗಿ ಹೊಯ್ತು ಈ ಮನಸಿನ ಬಗೆಗೆ

ಕಾಕುತ್ಸ ಬುದ್ಧಿಯ ಬಿಡಲೊಲ್ಲದು ಈ ಮನವು

ಕ್ಯಾಕರಿಸಿ ಉಗಿದರು ಬುದ್ಧಿಯ ಬಾರದು ಇದಕೆ

ತಾಕಲಾಟವ ಮಾಡುವುದು ತಕರಾರು ತೆಗೆವದು

ಟೀಕು ಪಾಕು ಮಾತಲಿ ಮರುಳ ಮಾಡಿದೆ ಜನಕೆ

ತಾಕುವ ಮನಸನು ನಿಗ್ರಹಿಸಿದರೆ ಕುನ್ನಿಯಂತೆ ಬೀಳುವುದು


ರಚನೆ :

ಯಗುಮಾಶ

*ಶರಣಬಸಪ್ಪ ಗುಳೇದ*


*೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 🌿🌿

              ನಿರ್ವಹಣೆ

   *ಶ್ರೀಮತಿ ಮಂಗಳ ಕೆ.ಹೆಚ್* 


*ಗಜಪ್ರಾಸ*(ಷಟ್ಪದಿ)


ಪ್ರಾಸಾಕ್ಷರದ ಹಿಂದಿನ ಅಕ್ಷರವು ದೀರ್ಘಸ್ವರವಾಗಿರಬೇಕು


 *ಉದಾಹರಣೆ*


ಈ ಶನ ಕರುಣೆಯ

ನಾ ಶಿಸು ವಿನಯದಿ

ದಾ ಸನ ಹಾಗೆಯೇ ನೀಮನವೇ


ಶ,ಶಿ.ಸ ಇವು ಪ್ರಾಸ ಅಕ್ಷರಗಳು


ಇವುಗಳ ಹಿಂದಿನ ಅಕ್ಷರಗಳು


ಈ,ನಾ, ದಾ ಇವು ದೀರ್ಘಸ್ವರಗಳು

ವಿಷಯಕ್ಕೆ ತಕ್ಕಂತೆ ಕವಿತೆ ಸಾಗಬೇಕು

ಅರು ಸಾಲಿಗೂ 

ಬರುವಂತೆ ನೋಡಿಕೊಳ್ಳಬೇಕು

ಜೊತೆಗೆ ವಿಷಯ ವಿವರಿತವಾಗಬೇಕು

೧.ಆರು ಸಾಲಿನ ಪದ್ಯ ಎರಡು ಅಥವಾ ಮೂರು ಪದ್ಯ ಬರೆಯಿರಿ

೨.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

              🙏🙏🙏

 *ಮಧುನಾಯ್ಕ.ಲಂಬಾಣಿ*

 *ಬ.ಬ.ರಾ.ಘ.ಹೂ.ಹಡಗಲಿ*


*ಪ್ರಾಸ*


ಪದ್ಯದ ಪ್ರತಿಯೊಂದು ಸಾಲಿನಲ್ಲಿ ನಿಯತವಾದ ಸ್ಥಳದಲ್ಲಿ ಒಂದೇ ರೀತಿಯ  ಅಕ್ಷರಗಳು ನಿಯತವಾಗಿ ಬಂದರೆ ಅದನ್ನು ಪ್ರಾಸ ಎನ್ನಲಾಗುತ್ತದೆ 


ಈ ಪ್ರಾಸದ ಪ್ರಸ್ತಾಪ ಕನ್ನಡದಲ್ಲಿ ಮೊದಲು ಲಕ್ಷಣ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಕಂಡುಬರುತ್ತದೆ


 ಲಾಕ್ಷಣಿಕರು ೧೬ ವಿಧದಲ್ಲಿ ಪ್ರಾಸಗಳ ಗುರುತಿಸಿದ್ದಾರೆ..


ಒಂದನೇ ನಾಗವರ್ಮ ತನ್ನ ಛಂಧೋಬುದಿಯಲ್ಲಿ  ಪ್ರಾಸದಲ್ಲಿ ಆರು ವಿಧಗಳ ಗುರುತಿಸಿದ್ದಾನೆ... ಎಲ್ಲವೂ ಪದ್ಯದಲ್ಲಿ ಆದಿ ಪ್ರಾಸಗಳಾಗಿಯೇ ಗುರುತಿಸಿದ್ದಾನೆ..

ಆದಿ ಪ್ರಾಸಗಳಲ್ಲಿ ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವಾಗಿ ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.


ಇವುಗಳನ್ನು ಇಂದು ಪ್ರಮುಖವಾಗಿ ಬಳಸಲಾಗುತ್ತಿದೆ..

ಅವುಗಳಲ್ಲಿ ಒಂದಾದ ಈ


*ಗಜ ಪ್ರಾಸ* ದ ವಿವರಣೆ ಬಗ್ಗೆ ನೋಡೋಣ..


*ಗಜ ಪ್ರಾಸ*


ಆದಿ ಪ್ರಸಾಕ್ಷರದ ಹಿಂದಿನ ಅಕ್ಷರ.ದೀರ್ಘಾ ಸ್ವರವಾಗಿದ್ದರೆ ಅದನ್ನು ಗಜ ಪ್ರಾಸ ಎನ್ನುತ್ತಾರೆ


೧) ಉದಾ:-


*ಮಾತಾ ಪಿತರನು ಬಳಲಿಸಿದಾತನು*

*ಯಾತ್ರೆ ಮಾಡಿದರೇನು ಫಲ*



ಇಲ್ಲಿ  ತಾ, ತ್ರೆ ಗಳು ಪ್ರಾಸ ಪದಗಳು (ತ,ತಿ,ತು,ತೆ


ಮಾ, ಯಾ ಇವು ಪ್ರಾಸಾಕ್ಷರದ ಹಿಂದಿನ ಪದಗಳು

ಇವು ಧೀರ್ಘ ವಾಗಿದ್ದರೆ ಮುಗಿಯಿತು  


೨) ಉದಾ:-ಅದರಂತೆ ಮತ್ತೊಂದು ಪದ್ಯ.. ಗಮನಿಸಿ ನೋಡಿ


ಈಶನ ಕರುಣೆಯ

ನಾಶಿಸು ವಿನಯದಿ

ದಾಸನ ಹಾಗೆಯೆ ನೀ ಮನವೇ

ಕ್ಲೇಶದ ವಿಧ ವಿಧ

ಪಾಶದ ಹರಿದು ವಿ

ಲಾಸದಿ ಸತ್ಯವ ತಿಳಿ ಮನವೇ



ಈ ಮೇಲಿನಂತೆ  ಗಜಪ್ರಾಸವಿರುವ ಒಟ್ಟು ಆರು  ಸಾಲುಗಳುಳ್ಳ ೨, ೩ ಪದ್ಯಗಳನ್ನು ರಚಿಸುತ್ತೀರಲ್ಲವೇ 



 ಧನ್ಯವಾದಗಳು..






            





No comments:

Post a Comment

Videos