*೧೪೨ನೇ ಗೋಷ್ಠಿ*
🌺🌺🌺
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌺🌺🌺
*ವಾರ-ಶುಕ್ರವಾರ*
🌺🌺🌺
*ದಿನಾಂಕ-೨೮.೦೮.೨೦೨೦*
🌺🌺🌺
*ವಿಷಯ-ಸೌಂದರ್ಯ*
*(ಆದಿಪ್ರಾಸ)*
🌺🌺🌺
೧
ಕನ್ನಡ ನಾಡಿನ ನಿಸರ್ಗ ಸೌಂದರ್ಯ
ಏನೇನು ಎಂದು ಬರೆಯಲು ಸಾಲದು
ಕಾನನದ ಸಸ್ಯಗಳು, ಹೂಗೊಂಚಲುಗಳು
ಕನಕಾಂಬರ,ಮಲ್ಲಿಗೆ,ಸಂಪಿಗೆ,ದಾಸವಾಳ
ಕನಕದಿಂದಲು ಸಮೃದ್ಧಿಯಾದ ನಾಡು ನಮ್ಮದು
ಕನ್ನಡಿಗರ ಹೆಮ್ಮೆಯ ಭವ್ಯ ಬೀಡು ನಮ್ಮದು
೨
ಮಗುವಿನ ಮುಖ ಸೌಂದರ್ಯ ಮನಕೆ ಮುದ
ಮಗು ಅತ್ತರೆ ಸಂಬಾಳಿಸುವದು ಕಷ್ಟವೇ ಸರಿ
ತಗಾದೆ ತೆಗೆದರೆ ತಾಯಿಯ ಹೊರತು ಸಮನಿಸಲು
ಗಗನ ಚಂದಿರನೋ ಭೂ ರವಿಯೋ ನಕ್ಷತ್ರವೋ
ತೆಗೆದು ಕೊಡುವೆ ಸಮಧಾನವಾಗೆಂದರು ಮಗು
ನಗದು ಆಗ ತಿಳಿಯುವುದು ತಾಯಿಯೇ ಹೆಚ್ಚೆಂದು
ರಚನೆ:
ಯಗುಮಾಶ
*ಶ್ರೀ ಶರಣಬಸ್ಸಪ್ಪ ಗುಳೇದ*
ಕವನದ ಶೀರ್ಷಿಕೆ :
"ಜೋಕುಮಾರನ ನೆನಪು"
ದೊಡ್ಡ ಬಾಯಿ ಅದರ ತುಂಬಾ ಬೆಣ್ಣೆ
ದಡುಸಾದ ಮೀಸೆ ಹಣೆಗೆ ವಿಭೂತಿ
ಗೌಡರ ಮನೆಯಲ್ಲಿ ಮೊದಲ ಪೂಜೆ
ಗಾಡಿ ಮೋಟಾರು ಬಯಸುವವನಲ್ಲ
ಬಂಡಿ,ಎತ್ತು ಬೇಕೆಂದು ಕೇಳುವವನಲ್ಲ
ಬಡವರ ಗಣಪನೆಂದು ಹೆಸರಾದಾತ
ಬೇವಿನ ಸೊಪ್ಪು ಕೆಂಪು ಚಂದ್ರ
ಹೂವಿನ ಅಲಂಕಾರವ ಗೈದುಕೊಂಡು
ದವಸ ಧಾನ್ಯವ ಬೇಡುತ ಬರುವರು
ನವೀರಾದ ಹಾಡನು ಹಾಡುತ ಊರಲ್ಲಿ
ದೇವ ಜೋಕುಮಾರನ ಒತ್ತು ತಿರುಗುವರ
ವಿವಿಧ ರೀತಿಯ ವರವ ಬೇಡುವರು ಜನರು
ಜೋಕುಮಾರ ಬಂದಾನ ಮನೆ ಮುಂದ ನಿಂತಾನ
ಜ್ವಾಕೀಲಿ ಏನಾರ ಕೊಡರವ್ವ ಎಂದು ಆಡುತಲೇ
ಮಕ್ಕಳು ಮರಿಗೆಲ್ಲ ಒಳ್ಳೆಯದು ಆಗಲೆವ್ವ ಎಂದು
ಜೋಕು ಪದವ ಆಡುವರು ಊರಲಿ ಗಂಗೆ ಮಕ್ಕಳು
ಯಾಕೋ ಹಳ್ಳಿಯ ಸೊಗಡು ಕಡಿಮೆ ಆಗುತ್ತಿದೆ
ಜೋಕುಮಾರನ ನೆನಪು ಮರೆಯಾಗದಿರಲಿ ನಮಗೆ
ರಚನೆ :
ಯಗುಮಾಶ
*ಶರಣಬಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ|| ಯಾದಗಿರಿ*
No comments:
Post a Comment