Saturday, August 29, 2020

ಸ್ವರಚಿತ ಕವನ ೨೮/೦೮/೨೦೨೦

 *೧೪೨ನೇ ಗೋಷ್ಠಿ*

                🌺🌺🌺

  *ಬರಹಗಾರರ ಬಳಗ ರಾಜ್ಯ ಘಟಕ* 

            *ಹೂವಿನಹಡಗಲಿ*

                🌺🌺🌺

            *ವಾರ-ಶುಕ್ರವಾರ*

                🌺🌺🌺

       *ದಿನಾಂಕ-೨೮.೦೮.೨೦೨೦*

                🌺🌺🌺

         *ವಿಷಯ-ಸೌಂದರ್ಯ*

               *(ಆದಿಪ್ರಾಸ)* 

                 🌺🌺🌺

                     ೧

ಕನ್ನಡ ನಾಡಿನ ನಿಸರ್ಗ ಸೌಂದರ್ಯ

ಏನೇನು ಎಂದು ಬರೆಯಲು ಸಾಲದು

ಕಾನನದ ಸಸ್ಯಗಳು, ಹೂಗೊಂಚಲುಗಳು

ಕನಕಾಂಬರ,ಮಲ್ಲಿಗೆ,ಸಂಪಿಗೆ,ದಾಸವಾಳ

ಕನಕದಿಂದಲು ಸಮೃದ್ಧಿಯಾದ ನಾಡು ನಮ್ಮದು

ಕನ್ನಡಿಗರ ಹೆಮ್ಮೆಯ ಭವ್ಯ ಬೀಡು ನಮ್ಮದು


                            ೨

ಮಗುವಿನ ಮುಖ ಸೌಂದರ್ಯ ಮನಕೆ ಮುದ

ಮಗು ಅತ್ತರೆ ಸಂಬಾಳಿಸುವದು ಕಷ್ಟವೇ ಸರಿ

ತಗಾದೆ ತೆಗೆದರೆ ತಾಯಿಯ ಹೊರತು ಸಮನಿಸಲು

ಗಗನ ಚಂದಿರನೋ ಭೂ ರವಿಯೋ ನಕ್ಷತ್ರವೋ

ತೆಗೆದು ಕೊಡುವೆ ಸಮಧಾನವಾಗೆಂದರು ಮಗು

ನಗದು ಆಗ ತಿಳಿಯುವುದು ತಾಯಿಯೇ ಹೆಚ್ಚೆಂದು


ರಚನೆ:

ಯಗುಮಾಶ

*ಶ್ರೀ ಶರಣಬಸ್ಸಪ್ಪ ಗುಳೇದ*

*೧೪೨ನೇ ಗೋಷ್ಠಿ*
                🌺🌺🌺
  *ಬರಹಗಾರರ ಬಳಗ ರಾಜ್ಯ ಘಟಕ* 
            *ಹೂವಿನಹಡಗಲಿ*
                🌺🌺🌺
            *ವಾರ-ಶುಕ್ರವಾರ*
                🌺🌺🌺
       *ದಿನಾಂಕ-೨೮.೦೮.೨೦೨೦*
                🌺🌺🌺
         *ವಿಷಯ-ಸೌಂದರ್ಯ*
               *(ಆದಿಪ್ರಾಸ)* 
                 🌺🌺🌺
                *ನಿರ್ವಹಣೆ*  *ಶ್ರೀನಿಸಾರ್ ಸಾಲಿನ್ ಹೊಳಗುಂದಿ* 
                  🌺🌺🌺
೧.ಆರು ಸಾಲಿನ ಪದ್ಯ
೨.ಪ್ರತಿ ಸಾಲಿನ ಪ್ರಾರಂಭದಲ್ಲಿ ಪ್ರಾಸ ಪದಗಳು ಬಂದರೆ ಅದು ಆದಿಪ್ರಾಸ

*ಆದಿಪ್ರಾಸ*(ಷಟ್ಪದಿ)

ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು

 *ಉದಾಹರಣೆ*

ಸ ತ್ತ ವರ ಕಥೆಯಲ್ಲ ಜನನದಿ
ಕು ತ್ತ ದಲ್ಲಿ ಕುದಿಕುದಿದು ಕರ್ಮದಿ
ಕ ತ್ತ ಲೆಯ ಸೀಮೆಗರ ಸಿಲುಕುವರು 

ಇಲ್ಲಿ ಸಾಲಿನ ಎರಡನೇ ಅಕ್ಷರ

ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ
ಮಂಡಿತವಾಗಬೇಕು

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

*೧೪೨ನೇ ಗೋಷ್ಠಿ*
                🌺🌺🌺
  *ಬರಹಗಾರರ ಬಳಗ ರಾಜ್ಯ ಘಟಕ* 
            *ಹೂವಿನಹಡಗಲಿ*
                🌺🌺🌺
            *ವಾರ-ಶುಕ್ರವಾರ*
                🌺🌺🌺
       *ದಿನಾಂಕ-೨೮.೦೮.೨೦೨೦*
                🌺🌺🌺
         *ವಿಷಯ-ಸೌಂದರ್ಯ*
               *(ಆದಿಪ್ರಾಸ)* 
                 🌺🌺🌺
                *ನಿರ್ವಹಣೆ*  *ಶ್ರೀನಿಸಾರ್ ಸಾಲಿನ್ ಹೊಳಗುಂದಿ* 
                  🌺🌺🌺
೧.ಆರು ಸಾಲಿನ ಪದ್ಯ
೨.ಪ್ರತಿ ಸಾಲಿನ ಪ್ರಾರಂಭದಲ್ಲಿ ಪ್ರಾಸ ಪದಗಳು ಬಂದರೆ ಅದು ಆದಿಪ್ರಾಸ

*ಆದಿಪ್ರಾಸ*(ಷಟ್ಪದಿ)

ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು

 *ಉದಾಹರಣೆ*

ಸ ತ್ತ ವರ ಕಥೆಯಲ್ಲ ಜನನದಿ
ಕು ತ್ತ ದಲ್ಲಿ ಕುದಿಕುದಿದು ಕರ್ಮದಿ
ಕ ತ್ತ ಲೆಯ ಸೀಮೆಗರ ಸಿಲುಕುವರು 

ಇಲ್ಲಿ ಸಾಲಿನ ಎರಡನೇ ಅಕ್ಷರ

ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ
ಮಂಡಿತವಾಗಬೇಕು

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*



ಕವನದ ಶೀರ್ಷಿಕೆ :

"ಜೋಕುಮಾರನ ನೆನಪು"


ದೊಡ್ಡ ಬಾಯಿ ಅದರ ತುಂಬಾ ಬೆಣ್ಣೆ

ದಡುಸಾದ ಮೀಸೆ ಹಣೆಗೆ ವಿಭೂತಿ

ಗೌಡರ ಮನೆಯಲ್ಲಿ ಮೊದಲ ಪೂಜೆ

ಗಾಡಿ ಮೋಟಾರು ಬಯಸುವವನಲ್ಲ

ಬಂಡಿ,ಎತ್ತು ಬೇಕೆಂದು ಕೇಳುವವನಲ್ಲ

ಬಡವರ ಗಣಪನೆಂದು ಹೆಸರಾದಾತ


ಬೇವಿನ ಸೊಪ್ಪು ಕೆಂಪು ಚಂದ್ರ

ಹೂವಿನ ಅಲಂಕಾರವ ಗೈದುಕೊಂಡು

ದವಸ ಧಾನ್ಯವ ಬೇಡುತ ಬರುವರು

ನವೀರಾದ ಹಾಡನು ಹಾಡುತ ಊರಲ್ಲಿ

ದೇವ ಜೋಕುಮಾರನ ಒತ್ತು ತಿರುಗುವರ

ವಿವಿಧ ರೀತಿಯ ವರವ ಬೇಡುವರು ಜನರು


ಜೋಕುಮಾರ ಬಂದಾನ ಮನೆ ಮುಂದ ನಿಂತಾನ

ಜ್ವಾಕೀಲಿ ಏನಾರ ಕೊಡರವ್ವ ಎಂದು ಆಡುತಲೇ

ಮಕ್ಕಳು ಮರಿಗೆಲ್ಲ ಒಳ್ಳೆಯದು ಆಗಲೆವ್ವ ಎಂದು

ಜೋಕು ಪದವ ಆಡುವರು ಊರಲಿ ಗಂಗೆ ಮಕ್ಕಳು

ಯಾಕೋ ಹಳ್ಳಿಯ ಸೊಗಡು ಕಡಿಮೆ ಆಗುತ್ತಿದೆ

ಜೋಕುಮಾರನ ನೆನಪು ಮರೆಯಾಗದಿರಲಿ ನಮಗೆ


ರಚನೆ :

ಯಗುಮಾಶ

*ಶರಣಬಸಪ್ಪ ಎಂ‌ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*











No comments:

Post a Comment

Videos