ಯಾದಗಿರಿ ನ್ಯೂಸ್ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟ
ಇದನ್ನು ವೀಕ್ಷಿಸಲು ☝️ ಇಲ್ಲಿ ಕ್ಲಿಕ್ ಮಾಡಿ
ಕವನದ ಶೀರ್ಷಿಕೆ:
"ಗಜಾನನ"
(ಭಾಮಿನಿ ಷಟ್ಪದಿ ಪ್ರಕಾರದ ರಚನೆಗೆ ಪ್ರಯತ್ನ)
ಗೌರಿ ಹಬ್ಬವ ಕಳೆದ ನಂತರ
ಗೌರಿ ಶಂಕರ ತನಯ ಬರುವನು
ಧರೆಯ ಮೇಲಿನ ಜನನ ಮರಣಗಳ ಗೆದ್ದವ ನೀನು
ಕರದಲಿ ತರತರಹದ ಲಾಡನು
ಪರಮ ಪೂಜೆಯ ಬಯಸಿ ನಾಡಿಗೆ
ವರವ ನೀಡುವ ಗಜಾನನಗಜಮುಖನೆ ಕಾಪಾಡು
ನಿನ್ನ ಮೇಲಿನ ನಂಬಿಕೆಯನ್ನು
ಭಿನ್ನ ರೀತಿಯ ಆಚರಣೆಯನು
ಜನರು ಮಾಡುವರು ಅನುನಯನದಲಿ ಕೃಪೆಮಾಡುಗಜಾ
ನನನೆ ಗಣಪತಿಯೆ ನಿನಗೆ ನಮಿಪೆ
ನಿನ್ನ ಪೂಜೆಗೆ ಜಾತಿ ಬೇಧವ
ತಾನು ಮನದಲ್ಲಿ ಮೇಲುಕೀಳು ಅರಿಯದ ಗಣಪತಿಯೇ
ಜಗದಲಿ ನಡೆದಿರುವ ಕರೋನಾ
ಖಗದಲಿಯು ಕಾಣದೆ ಪಯಣಿಸಲಿ
ಹಾಗೆಯೇ ನಡುಗುತ ಅಂಜುತ ಓಡಿ ಹೋಗುವುದೇ
ಗಗನ ಬಾನಿನಲಿ ಸುಳಿಯದಂತೆ
ಜಗಕೆ ಸಂತಸ ನೀಡು ಗಣಪತಿ
ಜಗದ ಸುಖದುಃಖಗಳ ಸಮವಾಗಿ ಕಾಣುವಂತೆ ಮಾಡು
ರಚನೆ
ಯಗುಮಾಶ
(ಶರಣಬಸಪ್ಪ ಗುಳೇದ)
🌷 *೧೩೭ನೇ ಗೋಷ್ಠಿ* 🌷
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲ*
🌹 *ವಾರ-ಶನಿವಾರ*
🌷 *ದಿನಾಂಕ-೨೨.೦೮.೨೦೨೦**
🌻 *ವಿಷಯ-ಮದ(ಸವಿಸಪ್ರಕಾರ*
🍀 *ನಿರ್ವಹಣೆ-ಶ್ರೀಚಿದಾನಂದ* *ಕಾನಹಳ್ಳಿ*
🌸 *ಸವಿಸ ಪ್ರಕಾರದ ಪರಿಚಯ*
*ಸ-ವಿ-ಸ ಪದದ ವಿಸ್ತೃತ ರೂಪ*
*ಸ- ಸಮಾನಾರ್ಥಕ ಪದ*
*ವಿ- ವಿರುದ್ಧ ಪದ*
*ಸ- ಸಮಾಸ ಪದ*
೧) ಇದು ಒಂದು ಹೊಸ ವಿಷಯ ಎಲ್ಲೂ ಸಿಗುವುದಿಲ್ಲ.
೨) ಇದು ಆರು ಸಾಲಿನ ಪದ್ಯ ಆರು ಸಾಲಿನಲ್ಲಿ ಯಾವುದಾದರೂ ಸಾಲಿನಲ್ಲಿ ಕನಿಷ್ಟ ಮೂರು ವ್ಯಾಕರಣಾಂಶಗಳು ಬಂದಿರಬೇಕು ಅದಕ್ಕಿಂತ ಹೆಚ್ಚುಬಾರಿ ಬಂದರು
ಪರವಾಗಿಲ್ಲ
ಉದಾಹರಣೆಗೆ
ಸವಿಸ ಪ್ರಕಾರ
*ಮದಾಂಧರು*
ಮೋಹ ತುಂಬಿದ ಮನ್ಮಥರವರು
ಸುಖ ದುಃಖವ ಸಮದೂಗಿಸದೆ
ಸಂಪ್ರದಾಯವ ತೂರಿ ನಡೆಯುವವರು..!
ಪ್ರೀತಿ ಪ್ರೇಮದ ಹೊಸ್ತಿಲಲ್ಲಿ ಬೆಳೆದು
ದಯೆ ದಾಕ್ಷಿಣ್ಯದ ಸತ್ವವರಿಯದೆ
ಹೆಬ್ಬಂಡೆಯಂತೆ ವರ್ತಿಸುವ ಮದಾಂಧರು..!!
ಸತ್ಯ ಸಂಗತಿಗಳ ಮಿಥ್ಯವಾಗಿಸುತ
ನೀತಿ ನಿಯಮಗಳ ತುಳಿಯುತಲಿ
ನೋವು ನಲಿವಿನ ಮಾರ್ಗವರಿಯದವರು.!
ಸರಳ ಸುಲಭ ಬವಣೆಯನೆದುರಿಸದೆ
ಹೆಮ್ಮರವಾಗಿಸಿ ನಿತ್ಯ ಬಿಂಬಿಸುತಲಿ
ಕಠಿಣ ಹಾದಿಯಲಿ ಸಾಗುವ ಮದಾಂಧರು..!!
ಸಮಾಜದಿ ಸುಜನರಂತೆ ಬದುಕುತ
ಸಮಾಜ ಬಾಹಿರ ಕಾರ್ಯವೆಸಗುತ
ಒಳಿತು ಕೆಡುಕಿನರಿವಿಲ್ಲದ ಮೃಗೀಯರವರು..!
ಆನಂದ ಹರುಷದ ಬದುಕಿಗೆ ಕುಕ್ಕುತ
ಕಠೋರತನ ತುಂಬಿ ಮದ್ದಾನೆಯಂತೆ
ಮುಂದೆಲೆಯನು ಕೊಡವುವ ಮದಾಂಧರು..!!
*✍...ಚಿಕಾಕೋ*
*ಚಿದಾನಂದಕಾನಹಳ್ಳಿಕೋಡಿಹಳ್ಳಿ.*
೩)ಆರು ಸಾಲಿನ ಪದ್ಯ ೩ ರಿಂದ ೪ ಪದ್ಯಬರೆಯಿರಿ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
*✍️ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನ ಹಡಗಲಿ*
🌷🌷🌷🌷🌷🌷🌷🌷🌷🌷🌷
*ಸವಿಸ ಹೊಸ ಸಾಹಿತ್ಯದ ಪ್ರಕಾರದ ಸಂಪೂರ್ಣ ಪರಿಚಯದೊಂದಿಗೆ*
*ಚಿದಾನಂದ್ ಕಾನಹಳ್ಳಿ.ಕೋಡಿಹಳ್ಳಿ*
✍️✍️✍️✍️✍️✍️✍️✍️✍️✍️
- ಸ್ನೇಹಿತರೆ ,
ಈಗಾಗಲೆ ನಮ್ಮ ಬಳಗದಲ್ಲಿ *ಅದ್ವಿಜೋ* ಎನ್ನುವ ಹೊಸ ಪ್ರಕಾರ ಬೆಳಕಿಗೆ ಬಂದು, ನಾವೆಲ್ಲರೂ ಆ ಒಂದು ಶೈಲಿಯಲ್ಲಿ ಕವಿತೆಗಳನ್ನ ಬರೆದು ಕಲಿತಿದ್ದೇವೆ. ಈಗಲೂ ಕಲಿಯುತ್ತಲೂ ಇದ್ದೇವೆ.
ಅಂತಹ ನಿಟ್ಟಿನಲ್ಲಿ ಇದೂ ಒಂದು ಹೊಸ ಪ್ರಕಾರವಾಗಿದ್ದು, ಕನ್ನಡದ ಮೂರು ವ್ಯಾಕರಣಾಂಶ ಪದಗಳ ಅನುಸಾರ, ನನ್ನ ವಿವೇಚನಾ ಶೈಲಿಯಲ್ಲಿ ಹೊಸ ಪ್ರಕಾರದ ಕವಿತೆ ರಚನೆ ಮಾಡಲು ಪ್ರಯತ್ನಿಸಿದ್ದೇನೆ. ಅಲ್ಲದೆ, ಇದಕ್ಕೆ *ಸವಿಸ* ಪ್ರಕಾರವೆಂದು ಹೆಸರಿಸಿ, ಹೊಸತನದ ಬೆಳವಣಿಗೆಗೆ ಕಿರು ಹೆಜ್ಜೆಯನಿಡಲು ತಮ್ಮೆಲ್ಲರ ಸಹಕಾರದೊಂದಿಗೆ ಕಾತರನಾಗಿದ್ದೇನೆ.
ಈ *ಸವಿಸ* ಪ್ರಕಾರವನ್ನ ನಾವೆಲ್ಲರೂ ಕಲಿತು, ಕಲಿಸೋಣ. ಇದರ ಪ್ರಖರತೆಯ ನಿರೀಕ್ಷೆಯಲ್ಲಿ ಸಾಗೋಣ ಅಂತ ಹೇಳ್ತಾ, ಇವಾಗ ತಮ್ಮ ಮನದಲ್ಲೊಂದು ಚಿಕ್ಕ ಯೋಚನೆ ಬಂದಿರಬಹುದು *ಸವಿಸ* ಅಂದ್ರೆ ಏನು..? ಅಂತ. ಕವಿ ಮಿತ್ರರೆ ಅದು ಬೇರೆ ಏನೂ ಅಲ್ಲ.
*ಸ-ವಿ-ಸ ಪದದ ವಿಸ್ತೃತ ರೂಪ*-
*ಸ - ಸಮಾನಾರ್ಥಕ ಪದಬಳಕೆ*
*ವಿ - ವಿರುದ್ಧಾರ್ಥಕ ಪದಬಳಕೆ*
*ಸ - ಸಮಾಸ ಪದಗಳ ಬಳಕೆ*
ಏನಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ಸಲಹೆ ಸೂಚನೆ ನೀಡುತ್ತೀರೆನ್ನುವ ಆಶಾಭಾವನೆಯೊಂದಿಗೆ....
*ಹೊಸತನದ ಹೆಜ್ಜೆಯಲ್ಲಿ ನಾವು ನೀವು.*
*ನಿಯಮಗಳು -*
೧. ಆರು ಸಾಲುಗಳುಳ್ಳ ಒಂದು ಪದ್ಯ
೨. ಪ್ರತಿ ಪದ್ಯದಲ್ಲೂ *ಸವಿಸ* ಪದ ಬಳಕೆಯಾಗಿ ಅರ್ಥಪೂರ್ಣ ಭಾವ ತುಂಬಬೇಕು
೩. ಯಾವುದೇ ರೀತಿಯ ಗೊಂದಲ, ಅಭಾಸವಾಗದ ರೀತಿ ಕವಿತೆ ರಚನೆಯಾಗಬೇಕು.
೪. ಕವಿತೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಪದ್ಯ ಇರಬೇಕು. ಹೆಚ್ಚಾದರೂ ತೊಂದರೆಯಿಲ್ಲ. ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಕೇವಲ ಪದಗಳಿಗೆ ಕಟ್ಟುಬಿದ್ದು ಚರಣ ಕಟ್ಟುವುದು ಬೇಡ. ಆದರೆ ಆ ಮೂರು *ಸ ವಿ ಸ* ಪದಗಳು ಬಳಕೆಯಾಗಲೇಬೇಕು.
೫. *ಸವಿಸ* ದಲ್ಲಿ ಯಾವ ಪದಗಳನ್ನಾದರೂ ಪ್ರಥಮವಾಗಿ ಬಳಸಬಹುದು ಆದರೆ ಅರ್ಥದ ಕಡೆ ಗಮನವಿರಲಿ.
೬. ಶಿರೋನಾಮೆಗೆ ಅನುಸಾರ ಕವಿತೆ ರಚಿಸಬೇಕು.
೭. ವಿರುದ್ಧಾರ್ಥಕ ಪದಗಳು ಜೊತೆಯಾಗಿಯೇ ಬಳಕೆಯಾಗಬೇಕು. ಆದರೆ ಅರ್ಥ ಅನರ್ಥವಾಗಬಾರದು.
*.................................................*
*ಉದಾಹರಣೆಗೆ:-*
ಉದಾಹರಣೆಗೆ
ಸವಿಸ ಪ್ರಕಾರ
*ಮದಾಂಧರು*
ಮೋಹ ತುಂಬಿದ ಮನ್ಮಥರವರು
ಸುಖ ದುಃಖವ ಸಮದೂಗಿಸದೆ
ಸಂಪ್ರದಾಯವ ತೂರಿ ನಡೆಯುವವರು..!
ಪ್ರೀತಿ ಪ್ರೇಮದ ಹೊಸ್ತಿಲಲ್ಲಿ ಬೆಳೆದು
ದಯೆ ದಾಕ್ಷಿಣ್ಯದ ಸತ್ವವರಿಯದೆ
ಹೆಬ್ಬಂಡೆಯಂತೆ ವರ್ತಿಸುವ ಮದಾಂಧರು..!!
ಸತ್ಯ ಸಂಗತಿಗಳ ಮಿಥ್ಯವಾಗಿಸುತ
ನೀತಿ ನಿಯಮಗಳ ತುಳಿಯುತಲಿ
ನೋವು ನಲಿವಿನ ಮಾರ್ಗವರಿಯದವರು.!
ಸರಳ ಸುಲಭ ಬವಣೆಯನೆದುರಿಸದೆ
ಹೆಮ್ಮರವಾಗಿಸಿ ನಿತ್ಯ ಬಿಂಬಿಸುತಲಿ
ಕಠಿಣ ಹಾದಿಯಲಿ ಸಾಗುವ ಮದಾಂಧರು..!!
ಸಮಾಜದಿ ಸುಜನರಂತೆ ಬದುಕುತ
ಸಮಾಜ ಬಾಹಿರ ಕಾರ್ಯವೆಸಗುತ
ಒಳಿತು ಕೆಡುಕಿನರಿವಿಲ್ಲದ ಮೃಗೀಯರವರು..!
ಆನಂದ ಹರುಷದ ಬದುಕಿಗೆ ಕುಕ್ಕುತ
ಕಠೋರತನ ತುಂಬಿ ಮದ್ದಾನೆಯಂತೆ
ಮುಂದೆಲೆಯನು ಕೊಡವುವ ಮದಾಂಧರು..!!
ತಮಗೆ *ಸವಿಸ* ಪ್ರಕಾರ ಕುರಿತು ಯಾವುದೇ ರೀತಿಯ ಗೊಂದಲ, ಸಮಸ್ಯೆಯಾದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಮಾಹಿತಿ ನೀಡಲು ನಾ ಸದಾ ಸಿದ್ದನಾಗಿರುವೆ. ಧನ್ಯವಾದಗಳು... 👏👏
*✍...ಚಿಕಾಕೋ*
*ಚಿದಾನಂದಕಾನಹಳ್ಳಿಕೋಡಿಹಳ್ಳಿ.*
No comments:
Post a Comment