ಕವನದ ಶೀರ್ಷಿಕೆ:
"ಯಾವುದು ಭಕ್ತಿ"
ಜಗತ್ತಿನಲ್ಲಿ
ಡಾಂಭಿಕದ ಭಕ್ತಿಯೇ
ಹೆಚ್ಚಾಗುತ್ತಿದೆ
ನಿಜವಾದ ಭಕ್ತರ
ನೋಡಿ ನಾಚಿಸುವಂತೆ
ದೇವಾಲಯದ
ಪೂಜೆ ಮಾಡುವಲ್ಲಿಯೂ
ಮನವಿಲ್ಲದೆ
ಎತ್ತೆಲೋ ಅಲೆದಿದೆ
ಮನವೆಂಬ ಮರ್ಕಟ
ಮನ ಶಾಂತಿಯ
ಬಯಸಿ ಬರುತ್ತಾರೆ
ಜನ ತನ್ನದೆ
ದುಃಖವನು ತೋಡಲು
ವರವ ನೀಡು ದೇವ
ಕರುಣೆದೋರು
ಮನುಜರ ಕಾಪಾಡು
ನಿನ್ನ ನಂಬಿದ
ಭಕ್ತರ ನಿಜವಾದ
ಭಕ್ತಿ ಗಮನಿಸದೆ
ಯಾವುದು ಭಕ್ತಿ
ಮುಖ್ಯವಲ್ಲ ಪ್ರಭು
ನಿನ್ನ ದರ್ಶನ
ಬಯಸಿ ಬಂದುದನು
ನೋಡಿ ಮುಕ್ತಿಯ ನೀಡು
ರಚನೆ:
ಯಗುಮಾಶ
(ಶರಣಬಸ್ಸಪ್ಪ ಗುಳೇದ)
No comments:
Post a Comment