Monday, November 23, 2020

ಚಿತ್ರಕ್ಕೊಂದು ಕವನ ೨೩/೧೧/೨೦೨೦

 



ಕವನದ ಶೀರ್ಷಿಕೆ

*ವೈರುಧ್ಯಗಳ ಸಂಕರ*


ನೋಡಲು ಚಿತ್ರ ವಿಚಿತ್ರ ಏನೆಂದು ಭಾವಿಸಲಿ

ಕೊರಳು ನೋಡಿ ನವಿಲೆಂದು ಕರೆಯಲೆ

ತಲೆಯು ನೋಡಲು ಹುಂಜದಂತೆ ಗೋಚರ

ಕೈಗಳು ನೋಡಲು ಒಂದು ಮಾನವನ ಕೈಯಂತೆ

ಕಂಡರು ಕಮಲದ ಹೂ ಹಿಡಿದು ತೋರಿಸುವಂತೆ

ಇನ್ನೊಂದು ಕಡೆ ಆನೆಯ ಮುಂಗಾಲು ಎತ್ತಿದಂತೆ


ದೇಹವು ಸಿಂಹದ ಆಕೃತಿಯನು ಹೋಲುವದು

ಹಿಂಗಾಲುಗಳು ಒಂದು ಹುಲಿಯ ಕಾಲಂತೆ

ಮತ್ತೊಂದು ವೇಗದ ಚಲಿಸೋ ಕುದುರೆ ಕಾಲು

ಶಂಖಾಕೃತಿಯ ಭುಜ ಹೊಂದಿರೆ ನಟ್ಟನಡುವೆ ಕಣ್ಣು

ಕಾವಲು ಕಾಯುವ ಯೋಧರ ತರದಿ ನೋಡುವ

ನಾಗ ಹೆಡೆಯ ಬಿಚ್ಚಿ ಸುತ್ತಲೂ ಪರಿಕಿಸುವ ಪರಿ


ಓಹೋ.... ಏನೇನೋ ನೂರಾರು ಯೋಚನೆ

ಮಾನವ ನವಿಲಿನ ನರ್ತನ ಸಂತಸ ಮೂಡಿಸೆ

ಕೂಗುವ ಹುಂಜ ಜಾಗೃತಿಯ ಕಹಳೆ ಊದುತ್ತ

ನಿದ್ದೆಗಣ್ಣಲ್ಲಿರುವವರ ಎಬ್ಬಿಸುವುದು ಅನುದಿನ

ಆದ್ರೆ ನಿದ್ದೆ ಬಂದಂತೆ ನಟಿಸುವವರು ಏಳುವರೇ

ಆನೆಯ ಗಾಂಭೀರ್ಯ ಗಟ್ಟಿತನ ಒಡಮೂಡಲಿ


ಕೈಯೊಳು ಪಿಡಿದ ಕಮಲವು ಪ್ರೀತಿ ಪ್ರೇಮ ನೀಡಲಿ

ಎಲ್ಲರೂ ನಾವು ನಮ್ಮವರ ಭಾವವು ಕೆರಳಲಿ

ಸಿಂಹ ದೇಹ ಸದೃಢ ಮನದಲಿ ಅನುರಾಗ ಅರಳಲಿ

ಶುಭ್ರ ಶ್ವೇತ ಬಣ್ಣದ ಶಂಖ ಶಾಂತಿಯ ಕರುಣಿಸಲಿ

ಹಾವಿನ ಬಾಲವು ಗಟ್ಟಿತನ ನೀಡಿ ಕಷ್ಟವ ತೊಲಗಲಿ

ವೈರುಧ್ಯಗಳ ಸಂಕರವಾದ ಚಿತ್ರ ಒಳಿತು ನೀಡಿ ಹರಸಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



No comments:

Post a Comment

Videos