Tuesday, November 17, 2020

ಸ್ವರಚಿತ ಕವನ ೧೬/೧೧/೨೦೨೦

 ಕವನದ ಶೀರ್ಷಿಕೆ

*ದೀಪಾವಳಿ ಸಂಭ್ರಮ*


ದೀಪ ಹಚ್ಚೇವು

ನಾವೆಲ್ಲ ಮನೆಯಲ್ಲಿ

ಆ ಬೆಳಿಕಿನ

ಬೆಲೆ ಅರಿಯದಾದ್ವಿ

ಕಣ್ಣು ಚೆನ್ನಾಗಿ ಇದ್ರೆ


ಜೀವನದಲ್ಲಿ

ಹಲವು ವರ್ಷಗಳ

ಕಾಲ ಇಂತಹ

ಅನೇಕ ಬೆಳಗನು

ಕಾಣುವೆವು ಎಂಬುದು


ಮಕ್ಕಳು ತಾವು

ಪಟಾಕಿ ಸುಡುವಾಗ

ಎಚ್ಚಿರಿಸುತ

ಕಾವಲಾಗಿ ಇರೋಣ

ಅನಾಹುತ ತಪ್ಪೀತು


ಹಿರಿಯರಾದಿ

ಕಿರಿಯರಿಂದ ದೀಪ

ಬೆಳಗಿಸುವ

ಮೂಲಕ ದೀಪಾವಳಿ

ಸಂಭ್ರಮ ಪಡುವರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

No comments:

Post a Comment

Videos