Thursday, November 5, 2020

ಸ್ವರಚಿತ ಕವನ ೦೫/೧೧/೨೦೨೦

 ಕವನದ ಶೀರ್ಷಿಕೆ

*ಆತ್ಮ ಗೌರವ*


ಮೊದಲು ನಮ್ಮನ್ನು ನಾವು ಪ್ರೀತಿಸಬೇಕು

ಇರಲಿ ನಮ್ಮ ಮೇಲೆ ನಾಮಗೆ ವಿಶ್ವಾಸ

ಹಿಡಿದ ಕಾರ್ಯ ಸಾಧಿಸುವೆನೆಂಬ ಛಲ

ನಮ್ಮಲ್ಲಿ ಮೂಡಿರಲು ಗೆಲುವು ನಮ್ಮದೆ


ಇಟ್ಟ ನಂಬಿಕೆಗೆ ತಕ್ಕಂತೆ ಕೆಲಸ ಮಾಡಬೇಕು

ಸತತ ಪರಿಶ್ರಮ ಪ್ರಯತ್ನ ತುಂಬಾ ಅಗತ್ಯ

ನಿಮ್ಮನ್ನು ನಾವು ಮೊದಲು ಗೌರವಿಸಬೇಕು

ಧೈರ್ಯದಿ ಮುನ್ನುಗ್ಗಿದರೆ ದಡ ತಲುಪಬಹುದು


ಸರಿ ತಪ್ಪುಗಳ ಯೋಚಿಸಿ ಮುನ್ನಡೆಯಬೇಕು

ಸರಿಯಾದ ದಾರಿಯಲ್ಲಿ ನಾವು ಸಾಗಬೇಕು

ಸಾಮರಸ್ಯದಿ ಬಾಳೋದು ಕಲಿಯಬೇಕು

ತಾನಾಗಿ ಬರುತವದು ನಮ್ಮನು ಗೌರವಿಸುವ ದಿನ


ನಮ್ಮ ನಂಬಿ ಬಾಳುವವರು ಇರುವರು ಅನೇಕ

ಅವರ ಕಡೆಗೂ ಕೊಡೋಣ ಸ್ವಲ್ಪ ನಮ್ಮ ಗಮನ

ಮನೆಯ ಸದಸ್ಯರ ಮಮತೆ ಪ್ರೀತಿ ವಾತ್ಸಲ್ಯವನು

ಗಳಿಸಿಕೊಂಡು ಉಳಿಸಿಕೊಂಡು ಹೋದರೆ ಸಾರ್ಥಕ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



No comments:

Post a Comment

Videos