ಕವನದ ಶೀರ್ಷಿಕೆ
*ಯಾರು ಸಿರಿವಂತರು?*
ಮನೆಗೆ ಬಂದ ಅತಿಥಿಗಳಿಗೆ
ಗೌರವ ನೀಡದವರಂತು ಅಲ್ಲ
ಅಧಿಕಾರ ದರ್ಪದಿಂದ ವರ್ತಿಸುವವ
ಖಂಡಿತ ಅಲ್ಲವೇ ಅಲ್ಲ
ಗುರುಹಿರಿಯರಿಗೆ ಗೌರವಿಸದಿರುವ
ವ್ಯಕ್ತಿಯಂತು ಅಲ್ಲವೇ ಅಲ್ಲ
ಕುತ್ಸಿಕ ಮೋಸ ವಂಚನೆ ದುರ್ಬುದ್ಧಿ
ಹೊಂದಿದವರಂತು ಅಲ್ಲ
ಜನರೊಂದಿಗೆ ಬೆರೆಯದಿರುವ
ಅನೂನ್ಯ ಸಂಬಂಧವಿರವರಂತು ಅಲ್ಲ
ಅಕ್ರಮ ಅತ್ಯಾಚಾರ ವಾಮ ಮಾರ್ಗದಲಿ
ನಡೆವವನಂತು ಅಲ್ಲವೇ ಅಲ್ಲ
ಮತ್ಯಾರು ಸಿರಿವಂತರು ಬಡತನವಿರಲಿ
ಸಿರಿತನವಿರಲಿ ಎಲ್ಲರನ್ನು ಗೌರವಿಸುವವರು
ಮೌಲ್ಯಯುತ ಸತ್ಯ,ನೈತಿಕತೆಯ ಹಾದಿಯಲಿ
ನಡೆವವರು ನಿಜವಾದ ಸಿರಿವಂತನಾಗುವರು
ರಚನೆ
ಯಗುಮಾಶ
ಯರಗೋಳ ತಾ.ಜಿ. ಯಾದಗಿರಿ
No comments:
Post a Comment