ಕವನದ ಶೀರ್ಷಿಕೆ
*ಅಪರಾಧ ತಡೆ*
ಕಾನೂನುಗಳು ಇರುವದು ಕಾಗದಲಿ
ಎಂದು ತಿಳಿದು ನಡೆವವರೆ ಅಧಿಕ
ಬೈಸಿಕಲ್ ಸವಾರಿ ಮಾಡುವವರು
ಕೂಡಿಸಿಕೊಳ್ಳುವರು ಮೂರಕ್ಕೂ ಅಧಿಕ
ಅಪಘಾತಗಳ ಅರಿವು ಇಲ್ಲ ಇವರಿಗೆ
ಶಿರಸ್ತ್ರಾಣ ಧರಿಸಲಾರರು ಬಹಳ ಜನ
ಮನದಲಿ ಇಲ್ಲ ಯಾವುದೇ ಭಯ
ತಿಳಿದರೆ ಕಡಿಮೆಯಾಗುವವು ಅಪಘಾತ
ರಸ್ತೆ ನಿಯಮಗಳು ಗೊತ್ತಾದರೆ ಸಾಕು
ಅಪರಾಧಗಳ ತಡೆಯಲು ಸಹಕಾರಿ
ಇಲ್ಲದೆ ಹೋದರೆ ಕಳೆದುಕೊಳ್ಳಬಹುದು
ಪ್ರಾಣ ಮತ್ತು ದೇಹದ ಕೆಲವು ಅಂಗಗಳ
ಅತೀ ವೇಗದ ಚಾಲನೆ ಮಸಣದ ದಾರಿ
ಕುಡಿದು ಗಾಡಿ ಓಡಿಸಿದರೆ ಅಂಕೆಗೆ
ಸಿಗದೆ ಜೀವದ ಸಂತೆಯ ಮುಗಿಸುವದು
ಎಚ್ಚರಿದಿ ಚಲಿಸಿದರೆ ಜೀವದಿ ಮನೆ ಸೇರುವೆವು
ದಯಮಾಡಿ ಎಲ್ಲರೂ ಸಾಧ್ಯವಾದಷ್ಟು
ರಸ್ತೆ ನಿಯಮಗಳು ಅರಿತು ನಡೆಯೋಣ
ಸುರಕ್ಷತಾ ಸಾಧನಗಳ ಬಳಕೆ ಮಾಡೋಣ
ಅಪರಾಧ ತಡೆ ಹಾಕುವ ಸಂಕಲ್ಪ ಮಾಡೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment