೧
ಜಾತಿ ಬೇದವ ಕಡೆಗಣಿಸಬೇಕಯ್ಯಾ
ನೀತಿ ಮಾರ್ಗವ ಹಿಡಿಯಬೇಕಯ್ಯಾ
ಛಲದಿ ಸಾಧಿಸುವ ಗುಣಬೇಕಯ್ಯಾ
ಸಜ್ಜನರ ಸಂಗ ಬಿಡದೆ ಪಾಲಿಸಯ್ಯಾ
ಸುಕೃತವ ಮಾಡಿ ಸದ್ಗತಿ ಪಡೆಯಬೇಕಯ್ಯಾ
ನಮ್ಮ ಗೂಳಿ ಬಸವ ಸದಾ ಕಾಯುವನಯ್ಯಾ
೨
ನಮ್ಮ ನಡೆ ನುಡಿ ಶುದ್ಧವಾಗಿರಬೇಕಯ್ಯಾ
ನಮ್ಮ ಅಂತರಂಗದ ಭಾವ ಒಳಿತಾಗಿರಬೇಕಯ್ಯಾ
ನಮ್ಮ ಶತೃಗಳು ನಾಚುವಂತೆ ನಡೆಯಬೇಕಯ್ಯಾ
ಗುರುಹಿರಿಯರ ಮಾತು ಕೇಳಿ ಗೌರವಿಸಬೇಕಯ್ಯಾ
ಸುಕೃತ ಕಾರ್ಯ ಗೈದರೆ ಬಾಳು ಬೆಳಗುವುದಯ್ಯಾ
ನಮ್ಮ ಗೂಳಿ ಬಸವನ ಬಿಡದೆ ನಂಬಬೇಕಯ್ಯಾ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment