Sunday, November 29, 2020

ಅಂತಿಮ ಯಾತ್ರೆ ಕವನ ೨೯/೧೧/೨೦೨೦

 


ಚಿತ್ರಕ್ಕೊಂದು ಕವನ
ಕವನದ ಶೀರ್ಷಿಕೆ

*ಅಂತಿಮ ಯಾತ್ರೆ*


ಇದ್ದಾಗ ಅದು ನಂದು ಇದು ನಂದು ಅಂತಿದ್ಧಿ

ಸತ್ತಾಗ ಎಲ್ಲಾನೂ ಇಲ್ಲೇ ಬಿಟ್ಟೊಂಟಿಯಲ್ಲೋ ||•||


ಜೊತೆಯಲ್ಲಿ ಯಾವುದ್ಯಾವುದಿಲ್ಲ ಎಲ್ಲಾ ಇಲ್ಲೇ

ನಾಕು ಮಂದಿ ಹೆಣ ಹೊರ್ಲಕ್ಕೆ ಬೇಕೆ ಬೇಕು

ಮನೆಗಾಗಿ ಹಗಲೆಲ್ಲ ದುಡ್ದು ಸಂಸಾರ ಸುಖ

ಅನುಭವಿಸಿ ಕಷ್ಟಗಳ ನೋವುಂಡು ‌ಬೆಳೆದಿ ||೧||


ಮಡದಿ ಮಕ್ಕಳ ಚಂದಿರಲೆಂದು ಭಾವಿಸಿದಿ

ಸತ್ತಾಗ ಅತ್ತರೆ ಸಿಗತೈತೇನು ನಿನ್ನ ಪ್ರೀತಿ ವಿಶ್ವಾಸ

ಬಾಳಲ್ಲಿ ಎಲ್ಲರೂ ನನ್ನವರೆಂದು ಹಚ್ಚಿಕೊಳ್ಳದೆ

ಜಾತಿ ಮತ ಭಾವ ಮನದಲಿ ಮೂಡಿಸಿಕೊಂಡಿ ||೨||


ಆಸ್ತಿ ಅಂತಸ್ತು ನೋಡಿ ಗೆಳೆತನ ನೀ ಮಾಡ್ದಿ

ಸತ್ತಾಗ ನಿನ್ನ ಹೆಸರ ಹೇಳಲು ಮನಸಿಲ್ಲ ಯಾರಿಗಿ

ಆಸೆಗಳು ಅನಂತ ಗಳಿಸಿದ್ದೆಲ್ಲಾ ಕ್ಷಣಿಕ ಸುಖ

ಕೂಡಿ ಬಾಳಿದ ನೆನಪು ಇನ್ನೂ ಇನ್ನೂ ಅಮರ ||೩||


ಅಂತಿಮ ಯಾತ್ರೆ ನಿಂದು ನಡೆದೈತಿ ಎಲ್ಲೆಲ್ಲೂ

ಮಾತುಗಳು ನಿಂದೆ ಕೇಳಿಬರುತೈತೆ ಬದುಕಿದ್ದ

ಮೂರುದಿನ ಚಂದ ಇದ್ರೆ ಒಳ್ಳೆಂವನಿದ್ದ ಅಂತಲೋ

ಕೆಟ್ಟಂವ ಇದ್ರೆ ಹೋಗಿದ್ದೆ ಚೊಲೋ ಅನ್ದಾರು ತಮ್ಮಾ ||೪||


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ





No comments:

Post a Comment

Videos