ಚಿತ್ರಕ್ಕೊಂದು ಕವನ
ಕವನದ ಶೀರ್ಷಿಕೆ*ಅಂತಿಮ ಯಾತ್ರೆ*
ಇದ್ದಾಗ ಅದು ನಂದು ಇದು ನಂದು ಅಂತಿದ್ಧಿ
ಸತ್ತಾಗ ಎಲ್ಲಾನೂ ಇಲ್ಲೇ ಬಿಟ್ಟೊಂಟಿಯಲ್ಲೋ ||•||
ಜೊತೆಯಲ್ಲಿ ಯಾವುದ್ಯಾವುದಿಲ್ಲ ಎಲ್ಲಾ ಇಲ್ಲೇ
ನಾಕು ಮಂದಿ ಹೆಣ ಹೊರ್ಲಕ್ಕೆ ಬೇಕೆ ಬೇಕು
ಮನೆಗಾಗಿ ಹಗಲೆಲ್ಲ ದುಡ್ದು ಸಂಸಾರ ಸುಖ
ಅನುಭವಿಸಿ ಕಷ್ಟಗಳ ನೋವುಂಡು ಬೆಳೆದಿ ||೧||
ಮಡದಿ ಮಕ್ಕಳ ಚಂದಿರಲೆಂದು ಭಾವಿಸಿದಿ
ಸತ್ತಾಗ ಅತ್ತರೆ ಸಿಗತೈತೇನು ನಿನ್ನ ಪ್ರೀತಿ ವಿಶ್ವಾಸ
ಬಾಳಲ್ಲಿ ಎಲ್ಲರೂ ನನ್ನವರೆಂದು ಹಚ್ಚಿಕೊಳ್ಳದೆ
ಜಾತಿ ಮತ ಭಾವ ಮನದಲಿ ಮೂಡಿಸಿಕೊಂಡಿ ||೨||
ಆಸ್ತಿ ಅಂತಸ್ತು ನೋಡಿ ಗೆಳೆತನ ನೀ ಮಾಡ್ದಿ
ಸತ್ತಾಗ ನಿನ್ನ ಹೆಸರ ಹೇಳಲು ಮನಸಿಲ್ಲ ಯಾರಿಗಿ
ಆಸೆಗಳು ಅನಂತ ಗಳಿಸಿದ್ದೆಲ್ಲಾ ಕ್ಷಣಿಕ ಸುಖ
ಕೂಡಿ ಬಾಳಿದ ನೆನಪು ಇನ್ನೂ ಇನ್ನೂ ಅಮರ ||೩||
ಅಂತಿಮ ಯಾತ್ರೆ ನಿಂದು ನಡೆದೈತಿ ಎಲ್ಲೆಲ್ಲೂ
ಮಾತುಗಳು ನಿಂದೆ ಕೇಳಿಬರುತೈತೆ ಬದುಕಿದ್ದ
ಮೂರುದಿನ ಚಂದ ಇದ್ರೆ ಒಳ್ಳೆಂವನಿದ್ದ ಅಂತಲೋ
ಕೆಟ್ಟಂವ ಇದ್ರೆ ಹೋಗಿದ್ದೆ ಚೊಲೋ ಅನ್ದಾರು ತಮ್ಮಾ ||೪||
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಯರಗೋಳ ತಾ.ಜಿ. ಯಾದಗಿರಿ
No comments:
Post a Comment