ಕವನದ ಶೀರ್ಷಿಕೆ
*ಕಂಗಳು ನೋವ ನುಂಗಿ*
ಲೇ ಸಖಿಯಾಗಿ ಹೊಸ ಬಾಳು ಅರಸಿ ಬಂದೆ
ಸುಖವಿಲ್ಲ ಎಳ್ಳಷ್ಟು ಬರೀ ಕಷ್ಟಗಳೆ ಭರಪೂರ
ಮನಸಲ್ಲಿ ದುಃಖವಿದ್ದರೂ ತೋರಿಸಲಾರೆಯಾ
ಬಡತನವೆಂಬ ಬಂಗಾರವೇ ಧರಿಸಿರುವೆ ನೀನು
ನಿನ್ನ ಕಣ್ಣಂಚಿನ ನೋಟ ನೋಡಲು ಬಲು
ಸುಂದರ ಆ ದಿನಗಳು ಹೋದವು ಎಲ್ಲಿ
ಮಕ್ಕಳು ಆಟೋಟದಲ್ಲೆ ಮರೆವೆಯಾ ಎಲ್ಲಾ
ಒಂದ್ಹೊತ್ತಿನ ಊಟ ಇಲ್ಲವೇ ನಿನಗೆ ನೆಮ್ಮದಿ
ಕುಡಿದು ಬಂದು ಹೊಡೆಯುವ ಗಂಡ ಬೇರೆ
ಅತ್ತೆ ಮಾವಂದಿರ ಸಂರಕ್ಷಣೆ ಬೇಕೇ ಬೇಕು
ರಾತ್ರಿ ಇಡೀ ಕುಡಿದಮಲಿನಲಿ ಶಿವರಾತ್ರಿ
ಕಣ್ಣಿಗಿಲ್ಲ ಕೊನೆಗೆ ನಿದ್ರೆಯ ಸುಖವ ಬೆರೆಸಿ
ಯೌವನದಲ್ಲಿ ದುಡಿದುಡಿದು ಸೋತು ಸುಣ್ಣ
ಬಂದ ಕೂಲಿನಾಲಿ ದುಡ್ಡು ಹೆಂಡದಂಗಡಿ ಪಾಲು
ಕೇಳಲು ಹೋದರೇ ಕೂದಲಿಡಿದು ಎಳೆದಾಡಿ
ಜಗಳ ತೆಗೆದು ಬೈಗುಳದ ಜೋಗುಳ ಜೋರಾಗಿ
ಮಕ್ಕಳನು ಚೆನ್ನಾಗಿ ಓದಿಸುವ ಆಸೆಯ ಮೂಟೆ
ನನಸಾಗುವುದೋ ಕನಸಾಗಿ ಉಳಿಯುವದೋ
ಅವರಿಂದಲಾದರೂ ನನ್ನ ನೋವ ಮರೆವೆನೋ
ಇಲ್ಲ ಕಣ್ಣೀರೇ ನನ್ನ ಹಣೆಬರಹವೋ ಗೊತ್ತಿಲ್ಲ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment