Saturday, November 21, 2020

ಸ್ವರಚಿತ ಕವನ ೨೧/೧೧/೨೦೨೦

 ಕವನದ ಶೀರ್ಷಿಕೆ

*ನನ್ನೂರು ಯರಗೋಳ*


ಬೆಟ್ಟ ಗುಡ್ಡದ

ನಡುವೆ ಕೆರೆ ಚಾಚಿ

ನಿಂತಿದೆ ಬಾಚಿ


ತಬ್ಬಿಕೊಂಡಿದೆ

ಜನ ಸಮೂಹ ಮನೆ

ಮಠಗಳೆಲ್ಲ


ವಿಶಾಲ ಗದ್ದೆ 

ಬಯಲು ತೋಟದಂಚು

ಪಾವನ ಭೂಮಿ


ಸಿದ್ಧಿ ಪುರುಷ

ಮಹಾತ್ಮರ ಸನ್ನಿಧಿ

ಹೊಂದಿದ ಊರು


ಹೆಮ್ಮೆಯ ಪುರ

ನನ್ನೂರು ಯರಗೋಳ

ನಿತ್ಯ ನೂತನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ






No comments:

Post a Comment

Videos