Tuesday, November 24, 2020

ಚಿತ್ರಕ್ಕೊಂದು ಕವನ ೨೪/೧೧/೨೦೨೦




 ಕವನದ ಶೀರ್ಷಿಕೆ

*ಪರಿಸರ ವಿನಾಶಕ ಮಾನವ*


ಗಿಡಮರಗಳ ಕಡಿದು ಮನೆಗಳ ಕಟ್ಟಿ

ಗಾಳಿಯಿಲ್ಲದೆ ಸಾಯುವ ಉಸಿರುಗಟ್ಟಿ

ನೆರಳನ್ನಿಯುವ ಮರ ಕತ್ತರಿಸಿ ಬಿಟ್ಟ

ಬಿಸಿಲ ಝಳಕ್ಕೆ ಸೋತು ಹೋದ ಕಂಗೆಟ್ಟು


ಮುಂಪೀಳಿಗೆಗೆ ಕೂನಿಲ್ಲದೆ ಹೋದವು ಹಲವು ಮರ

ಭಾವಚಿತ್ರದಲಿ ತೋರಿಸುವಂತಾದೀತು ಕೆಲವು ಮರ

ಹಸಿರೇ ಉಸಿರು ಎಂದು ಜಂಬದಿ ಬೀಗಿ ಬಸಿರು

ಬಡಿದುಕೊಂಡರು‌ ಸಿಗದಾದೀತು ಭಾವೀ ಜನರು


ನಮ್ಮ ನಾಶ ನಾವೇ ಮಾಡುತಿಹೆವು

ಮರದ ಕೊಂಬೆ ಏರಿ ಅದೇ ರೆಂಬೆ ಕಡಿತಿಹೆವು

ಆಧುನಿಕತೆಯ ಬರದಲ್ಲಿ ನೆರಳನ್ನೆ ಮರೆತಿಹೆವು

ಎತ್ತು ಕತ್ತೆಗಳು ಹೋಗಿ ಗಾಡಿ ಮೋಟಾರು ಬರುತಿಹೆವು


ಗಿಡಗಳೆಲ್ಲ ಬೋಳಾಗಿ ಅರಸಿ ಹೊರಟವು ಪ್ರಾಣಿ ಪಕ್ಷಿ

ಮಳೆ ನೀರು ಕಾಣದೆ ಅತ್ತವು ನಿರಾಸೆರಾಗಿ ಬಿಕ್ಕಿ ಬಿಕ್ಕಿ

ಕರುಣೆಯಿಲ್ಲದ ಪರಿಸರ ವಿನಾಶಕ ಮಾನವ ಕಕ್ಕಬೇಕು

ಮುಂದೆ ಪಶ್ಚಾತ್ತಾಪ ಪಟ್ಟು ಮುರಿದಾಗ ಅವನ ಸೊಕ್ಕು


ತಾಯಿ ಹಕ್ಕಿ ನೆರಳ ನೀಡುವುದು ತನ್ನ ಮರಿಗಳಿಗೆ

ಅರಿಯದಾದ ಮನುಜ ಇರಲಿ ತನ್ನ ವಂಶಜರಿಗೆ

ಮರ ಕಡಿದರೆ ವರುಣನ ಮುನಿಸು ಗೊತ್ತಿಲ್ಲ ಅವನಿಗೆ

ಸಕಾಲಕ್ಕೆ ಮಳೆ ಬೆಳೆ ಬರಲು ಬೆಳೆಸಿ ಗಿಡ ತಲೆಬಾಗಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



No comments:

Post a Comment

Videos