Friday, November 20, 2020

ಸ್ವರಚಿತ ಕವನ ೨೦/೧೧/೨೦೨೦

 ಕವನದ ಶೀರ್ಷಿಕೆ

*ಜಾತ್ಯಾತೀತ ಭಾವನೆ*


ಮಾನವ ಎಷ್ಟೋ

ವರ್ಷ ಇತಿಹಾಸದಿ

ಬೆಳೆದರೇನು?


ಸಜ್ಜನನೆಂದು

ಪ್ರಖ್ಯಾತಿ ಪಡೆದರು

ಬಿಡದಾದನು


ಜ್ಯಾತಿಯ ಬೇರ

ಗಟ್ಟಿಯಾಗಿ ಹಿಡಿದ

ತನ್ನಂತೆ ಇರೋ


ಮನುಜರನು

ನೋಡನು ಸರಿಸಮ

ತಾ ಶ್ರೇಷ್ಠ ನೀನು


ಕನಿಷ್ಠ ಎಂಬ

ಮೇಲು ಕೀಳು ನಾಟಕ

ಬಿಟ್ಟರೆ ಆಗ


ಮನುಕುಲವೇ

ಒಂದು ಕುಟುಂಬವಾಗಿ

ಗಂಡು ಹೆಣ್ಣೆಂಬ


ಎರಡೇ ಜಾತಿ

ಇರುವವು ಅಂತಹ

ಕಾಲ ಬರಲಿ


ಸರ್ವರು ಜಾತಿ

ಮತ ಭೇದ ಮರೆತು

ಬಾಳೋಣ ನಾವು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


No comments:

Post a Comment

Videos