ಕವನದ ಶೀರ್ಷಿಕೆ
*ಸೂತ್ರವಿರದ ಗಾಳಿಪಟ*
(ಟಂಕಾ ಪ್ರಕಾರ)
ಮಕ್ಕಳೆಲ್ಲರೂ
ಕೇಳಿ ಬದುಕು ನೀವು
ಅಂದುಕೊಂಡಂತೆ
ಸುಲಭವಲ್ಲ ಬಹು
ಜಾಗೃಕರಾಗಬೇಕು
ಅಪ್ಪಿತಪ್ಪಿಯೂ
ತಪ್ಪು ಹೆಜ್ಜೆ ಇಟ್ಟರೆ
ಕಷ್ಟ ತಪ್ಪದು
ನೀತಿ ಮಾರ್ಗವ ಹಿಡಿ
ನಂಬಿಕೆಯಿಂದ ನಡೆ
ಹದಿ ಹರೆಯ
ವಯಸ್ಸಿನಲಿ ದಾರಿ
ಬಿಡಬಾರದು
ಪ್ರೀತಿ ಪ್ರೇಮದ ಬಗ್ಗೆ
ಹುಷಾರಾಗಿರಬೇಕು
ಚೆನ್ನಾಗಿ ಓದಿ
ಮುಂದೆ ಬಂದರೆ ಬಾಳು
ಬಂಗಾರ ಇಲ್ಲ
ಸೂತ್ರವಿರದ ಗಾಳಿ
ಪಟದಂತೆ ಆದೀತು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment