Monday, November 2, 2020

ಸ್ವರಚಿತ ಕವನ ೦೨/೧೧/೨೦೨೦

 ಕವನದ ಶೀರ್ಷಿಕೆ

*ತಾಳ್ಮೆ ಎಂಬ ಬೆಳಕು ಬೇಕು*


ಬಾಳ ಬೆಳಗಲು ತಾಳ್ಮೆ ಎಂಬ ಬೆಳಕು ಬೇಕು

ಶ್ರದ್ಧೆಯಿಂದ ಓದಿ ಜೀವನದಿ ಗೆಲ್ಲಬೇಕು 

ನಿತ್ಯವೂ ದುಡಿದು ಧನಿಕನಾಗಬೇಕು

ನೀತಿ ನಿಯಮದಿ ನಿತ್ಯವೂ ಬಾಳಬೇಕು


ಸಂಸಾರಲಿ ಬೈದು ಬುದ್ಧಿ ಹೇಳುವರು

ತಿದ್ದಿ ನಡೆದರೆ ಬಾಳು ಒಂದು ಬಂಗಾರ

ಹಿರಿಯರು ಸದಾ ಹಿತವನ್ನು ಬಯಸುವರು

ತಪ್ಪೆಂದು ಬಾವಿಸಿ ನೀ ಕೋಪಗೊಳ್ಳದಿರು


ಇವು ನಮ್ಮ ಏಳ್ಗೆಗೆ ಪೂರಕವಾಗಿವೆ ನೋಡಾ

ಧೈರ್ಯದಿಂದ ಕಷ್ಟವ ಎದುರಿಸಬೇಕು ನೋಡಾ

ಸುಖ ದುಃಖಗಳ ಸಮವಾಗಿ ಕಾಣಬೇಕು ನೋಡೋ

ಸಜ್ಜನರ ಸಹವಾಸ ಮಾಡೋದು ಮರೆಯಬೇಡೋ


ಜೀವನದಲ್ಲಿ ಸಹನೆ,ಸಹಬಾಳ್ವೆಯ ಬದುಕು

ಹೊಂದಾಣಿಕೆ,ಸ್ನೇಹ,ಸೌಹಾರ್ದತೆಯು ಸಾಕು

ಸತ್ಯ ನುಡಿ,ಸಂಸ್ಕೃತಿ, ಪರಂಪರೆ ಉಳಿಸಬೇಕು

ನಿರಹಂಕಾರದ ತಾಳ್ಮೆಯನು ರೂಢಿಸಿಕೊಳ್ಳಬೇಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




No comments:

Post a Comment

Videos