ಕವನದ ಶೀರ್ಷಿಕೆ
*ಬಾಳ ನೌಕೆ*
(ಭಾಮಿನಿ ಷಟ್ಪದಿ)
ಬಾಳು ಕಡಲಿನ ಒಡಲು ಭಾವದ
ಸುಳಿಗೆ ಸಿಲುಕದ ರೀತಿ ನೋಡಿಕೊ
ಕಳವು ಮಾಡದೆ ನೀತಿ ಮಾರ್ಗದಿ ನಡೆದು ಬದುಕಿನಲಿ
ಸೆಳವು ಬಂದರೆ ಧೈರ್ಯದಿಂದಿರು
ಇಳೆಗೆ ಮಳೆಯಾ ಬಂದು ಊರಿನ
ಕಳೆ ತಗೆವ ತರದಿ ನಮ್ಮ ಕಷ್ಟವು ಕೂಡ ತೊಲಗುವವು
ರವಿಯು ಭೂಮಿಗೆ ಬೆಳಕು ಚೆಲ್ಲುವ
ತವಕದಿಂದಲೆ ಓಡಿ ಬರುವನು
ಕವಿದಿರುವ ಕತ್ತಲುನು ಒಡದೋಡಿಸದೆ ಬಿಡಲಾರ
ಸಾವದಾನದಿ ನೀನು ಯೋಚಿಸು
ಬವಣೆ ಸಾಗಲು ಹಲವು ತೊಂದರೆ
ಸಾವು ಬಂದರು ಬರಲಿ ಎನ್ನುತ ಸತತ ಹೋರಾಡು
ಬದುಕಿ ಉಳಿಯಲು ಅನುದಿನವು ನೀ
ಮುದದಿ ಕಷ್ಟ-ಸುಖಗಳ ಎದುರಿಸು
ನದಿಯ ಮೂಲಕ ಚಲಿಸೊ ಹಡಗಿಗೆ ಅಲೆಯು ಅಪ್ಪಳಿಸಿ
ಅದರ ದಾರಿಯ ತಪ್ಪಿಸುವವೋ
ಕದಲದಿರು ನೀ ಬಾಳ ನೌಕೆಯ
ಹದವರಿತು ಜೀವನವ ನಡೆಸೋ ಜಾಣ ಮರೆಯದೆ ನೀ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment