Saturday, November 7, 2020

ಸ್ವರಚಿತ ಕವನ ೦೭/೧೧/೨೦೨೦

 ಕವನದ ಶೀರ್ಷಿಕೆ

*ಸೇಡು*


ಯಾವ ವ್ಯಕ್ತಿಯಲ್ಲಿ ಸೇಡು ಮನೆಮಾಡಿರೆ

ಆ ಮನುಷ್ಯನ ಅಧಃಪತನಕ್ಕೆ ದಾರಿ

ಸೇಡಿನ ಕೈಯಲ್ಲಿ ಬುದ್ಧಿ ಕೊಟ್ಟರೆ

ಕೋಪದಿಂದ ಹಾಳಾಗುವುದು ಸಂಸಾರ


ಮನದಲ್ಲಿ ವೈಷಮ್ಯ ತಲೆದೋರುವವು

ಸಂಬಂಧಗಳು ಸಡೀಲವಾಗುವವು

ನಂಬಿಕೆಗಳು ಹುಸಿ ಎನಿಸುವವು

ಒಂಟಿತನ ಭಾವನೆಗಳು ಕಾಡುವವು


ಕೋಪಿಷ್ಠನಾದವನಿಗೆ ಗೌರವ ಸಿಗದು

ಅದಕ್ಕಾಗಿ ಹತೋಟಿಗೆ ತರಲು ಸದಾ

ಪ್ರಯತ್ನ ಮಾಡುತ ಮನೋನಿಗ್ರಹದ

ಸಂಕಲ್ಪ ತೊಟ್ಟರೆ ವ್ಯಕ್ತಿತ್ವ ವಿಕಸವಾಗುವುದು


ಪ್ರೀತಿ ವಿಶ್ವಾಸ ವಾತ್ಸಲ್ಯ ತೋರುತ

ಎಲ್ಲರಿಗೆ ಬೇಕಾಗಿ ಒಂದಾಗಿ ಬಾಳುತ

ನೆಮ್ಮದಿ ಶಾಂತಿಯಿಂದ ಸಮಾನತೆ

ಸಹಬಾಳ್ವೆಯಡೆಗೆ ಸಾಗೋದೆ ಜೀವನ ಪಥ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



🙏ಶುಭೋದಯ 🙏


 *ಬರಹಗಾರರ ಬಳಗ ರಾಜ್ಯ ಘಟಕ** 

          *ಹೂವಿನಹಡಗಲಿ* 


 *ಕಾವ್ಯಸೃಷ್ಠಿ-೨೧೩* 

೭/೧೧/೨೦೨೦-ಶನಿವಾರ

 *ವಿಷಯ-ಸೇಡು* 

ನಿರ್ವಹಣೆ- *ಶ್ರೀಸಂತೋಷ* *ನಿಂಗಾಪೂರ*

 *ಗದಗ*

   

ಕವಿತೆ ೧೬ ರಿಂದ ೨೦ ಸಾಲಿರಲಿ


 *ಗಮನಿಸಿ*

೧.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೨.ಗೋಷ್ಠಿಯಮದ್ಯೆ ಬೇರೆ ಏನನ್ನೂ ಹಾಕಬಾರದು


 *ಸರ್ವ ಸಾಹಿತ್ಯದ ಸಿರಿ ಸಂಪತ್ತಿನ ಸಂತೋಷನ ಸಂಗಡಿಗರಿಗೆ ಸ್ವಾಗತ ಸುಸ್ವಾಗತ* 


👍🙏🥰🌹

No comments:

Post a Comment

Videos