ಕವನದ ಶೀರ್ಷಿಕೆ
*ಬರ್ರೋ ಹೆಣ ಬಂತು ಓಡಿ ಹೋಗೋಣ*
ಕರೋನ ಕಾಲದ ಹೆಣಕ್ಕಿಲ್ಲ ಬೆಲೆ
ಅರಿತು ನಡೆದರೆ ಮನುಜನಿಗೆ ನೆಲೆ
ಮುಟ್ಟಂಗಿಲ್ಲ ನೋಡಂಗಿಲ್ಲ ಕ್ಯಾಲ
ಕಕಲಾತಿ ಅಂತ ಪೂರ ತೋರಂಗಿಲ್ಲ
ಹಣ ಗಳಿಸಿ ಹೆಣ ಆದ್ರೆ ಕೇಳೋರ್ಯಾರು
ಇಲ್ಲೋ ಎಪ್ಪ ಜೀವಕ್ಕೆ ಅಂಜಿ ಕರೆ ಕರೆ
ಮನೆಬಿಟ್ಟು ಬರೊಂಗಿಲ್ಲೊ ಯ್ಯಾರ್ಯಾರು
ಸನಿಹ ಹೆಣ್ತಿ ಮಕ್ಳು ಇದ್ದಾಗಟ್ಯಾ ಮರೆಯದಿರು
ಬಂಧು ಬಾಂಧವರ ಸಂಬಂಧ ಗಟ್ಟಿ ಇಡ್ಕೋ
ಬದಕಿದಾಗ ಒಳ್ಳೆವ ಇದ್ದ ಅಂತ ಹೇಳಾಕ್ಕ
ಬರುತೈತೆ ನೀ ಏನ್ರಾ ಸಿಡ್ಕ ಪಿಡ್ಕ ಮಾಡ್ಕೋ
ಬ್ಯಾಡೋ ಚೆಂದ ಬಾಳೋಣ ಇಲ್ಲಿ ಇರೋ ತನ್ಕಾ
ಕಾಲ ಹೆಂಗ್ ಬರತೈತಿ ಹೇಳಾಕಬರಲ್ಲಾ
ಕೆಟ್ಟ ಸಮಯ ಬಂದ್ರೆ ಹುಡ್ಕಾಡ್ಕೊಂಡು ಎಲ್ಲಾ
ನಾನು ನಂದು ಅಂತ ಗಳಿಸಿದ್ದು ಒಯ್ಯೊಲ್ಲಾ
ಇದ್ದುದರಾಗ ಹಂಚಿಕೊಂಡು ಬದುಕು ಗೆಲ್ಲೋ
ಕರೋನ ಅಬ್ಬರಕ್ಕೆ ಸಿಕ್ಕು ಮಡಿದವರ ಪಾಡೆಲ್ಲಾ
ಊಳಾಕ ಕುಣಿ ತೋಡೋವರ ಗತಿ ಇಲ್ದೆ ಎಲ್ಲೋ
ಇದ್ದೋರೂ ಬರ್ರೋ ಹೆಣ ಬಂತು ಓಡಿ ಹೋಗೋಣ ಎಲ್ಲಾ
ಎಂದು ಓಡುವ ಪಾಡು ಬಾರದಿರಲಿ ಕರೋನ ಓಡಲಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment