ಕವನದ ಶೀರ್ಷಿಕೆ
*ಸ್ವಾತಂತ್ರ್ಯ ಸಂಗ್ರಾಮ*
ಸ್ವಾತಂತ್ರ್ಯ ಸಂಗ್ರಾಮದಲಿ ಸಾವಿರಾರು ಜನ
ಹೋರಾಡಿ ವೀರ ಮರಣ ಹೊಂದಿದರು ತಮ್ಮ
ಕುಟುಂಬದ ಮಾನ,ಪ್ರಾಣ,ಆಸ್ತಿಯ ಲೆಕ್ಕಿಸದೆ
ಹಲವರು ಮನೆ - ಮಠ ತೊರೆದು ಬ್ರಿಟೀಷರ
ವಿರುದ್ಧ ಸಿಡಿದೆದ್ದು ಬಂಡಾಯದ ಬಾವುಟ
ಹಾರಿಸುವ ಮೂಲಕ ಐಕ್ಯತೆ ಮೂಡಿಸಿದರು
ರಾಮ ರಾಜ್ಯದ ಕನಸು ಕಂಡು ನನಸಾಗಲು
ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದರು
ಹೋರೋಟದ ಕಾವು ಹೆಚ್ಚಿ ಆಂಗ್ಲರ ಸೊಲ್ಲು
ಅಡಗಿಸಲು ಹಗಲಿರುಳೆನ್ನದೆ ಸಂಘಟಿಸಿದರು
ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ
ಯುವಕರ ದಂಡು ಹೂಡಿದರು ದಂಗೆಗಳನು
ಕ್ರಾಂತಿ ಕಿಡಿ ಹೊತ್ತಿಸಿದರು ತೀವ್ರಗಾಮಿಗಳು
ಸತ್ಯ ಅಹಿಂಸೆ ತ್ಯಾಗ ಬಲಿದಾನ ಬಿತ್ತಿದವರು
ಮಹಾತ್ಮ ಗಾಂಧೀಜಿಯವರು ಉಪವಾಸ
ಸತ್ಯಾಗ್ರಹ ಎಂಬ ಅಸ್ತ್ರ ಬಳಸಿ ಅಧಿಕಾರಿಗಳ
ಬಗ್ಗುಬಡಿದರು ಮಂದಗಾಮಿ ನಾಯಕರು
ಹೀಗೆ ಭಾರತಾಂಬೆಯ ವಿಮೋಚನೆ ಆಗುತ್ತದೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment