Sunday, November 29, 2020

ಮರದ ಅಳಲು ಕವನ ೨೬/೧೧/೨೦೨೦

 


ಚಿತ್ರಕ್ಕೊಂದು ಕವನ

ಕವನದ ಶೀರ್ಷಿಕೆ

*ಮರದ ಅಳಲು*


ಹಲವು ಪ್ರಾಣಿ ಪಕ್ಷಿ ಸರಿಸೃಪಗಳ ಬಳಗ

ಖಗ ಮೃಗಗಳ ಸಹಿತ ಚರಾಚರ ಜೀವಿಗೆ

ಹೊರೆದು ಕಾಪಾಡುವುದು ತಪ್ಪದೆ ಎಮಗೆ

ಚಿಂವ್ ಚಿಂವ್ ಸದ್ದುಮಾಡುತ ಗುಬ್ಬಿ ಕಾಗೆ


ಮುಂಜಾವಿನ ಚುಮುಚುಮು ಬೆಳಕಿನಲಿ

ಬಾಲ ಭಾಸ್ಕರನ ಆಗಮಕೆ ಸ್ವಾಗತ ಕೋರಲು

ಬಿಲದೊಳಗೆ ಬಾಲ ಮುದುರಿಕೊಂಡು ಕೆಲ

ಇಲಿ ಗಡಣವು ರವಿಯ ಕಿರಣ ಡಿಂಡಿಮ ಬೀರಲು


ಒಡನೆಯೇ ಓಡೋಡಿ ಹೊರಬಂದು ಹಾಲದ

ಮರದ ರೆಂಬೆ ಕೊಂಬೆಗಳಲಿ ಚೆಲ್ಲಾಟ ಸದಾ

ಬಿರುಗಾಳಿ ಬೀಸಿದರು ಲೆಕ್ಕಿಸದೆ ಗೂಡಿನಿಂದ

ಗೂಡಿಗೆ ವಯ್ಯಾರದಿ ಕುಣಿವವು ಜಿಗಿಜಿಗಿದು


ಮರದ ಪ್ರಪಂಚವು ಈ ರೀತಿ ಚೊಕ್ಕವಾದದ್ದು

ಮಾನವ ಕೆಲವು ಮರ ಮುಟ್ಟುಗಳ ಕಡಿದು

ಅವುಗಳ ಆನಂದ ಕೆಡಿ‌ಸುವನು ಆಗ ಮರದ

ಅಳಲು ಕೇಳುವವರು ಯಾರು ಇಲ್ಲ ವ್ಯಾಘ್ರದ


ಮನಸನು ಹೊಂದಿರುವ ಹಲಕೆಲವು ಜನರು

ದೊಡ್ಡ ದೊಡ್ಡ ಮರಗಳ ಕಡಿದರೆ ಅಲ್ಲಿರೋ

ಜೀವ ಸಂಕುಲಗಳು ಬೇರೆಡೆ ಹೋಗದೆ ನೀರು

ನೆರಳು ಇಲ್ಲದೆ ಹೊದ್ದಾಡಿ ಪ್ರಾಣ ಬಿಡುವುದು ಕರೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ











No comments:

Post a Comment

Videos