ಕವನದ ಶೀರ್ಷಿಕೆ
*ಭಾಷಾಭಿಮಾನ ಬೆಳೆಸೋಣ*
ಕದಂಬ ಚೋಳ ಚಾಲುಕ್ಯ ಉತ್ಸವ
ಹೊಯ್ಸಳ ಶೈಲಿಯ ಶಿಲೆಯ ಬಾವ
ಶ್ರವಣ ಬೆಳಗೊಳ ಗೊಮ್ಮಟನ ಠೀವಿ
ಮೈಸೂರು ದಸರಾ ಮಹೋತ್ಸವ
ಪಂಪ ಪೊನ್ನ ರನ್ನ ಜನ್ನ ಕವಿ ಸ್ವಾದ
ರಾಜಾಧಿರಾಜರೆಂಬ ಘನತೆ ಮೆರೆದ
ವೀರ ಸಂಗೊಳ್ಳಿ ರಾಯಣ್ಣನ ಗಂಡೆದೆ
ಕಿತ್ತೂರ ರಾಣಿ ಚೆನ್ನಮ್ಮನ ರಣ ಕಹಳೆ ಸದ್ದು
ಕೆಚ್ಚೆದೆಯ ಸೈನಿಕರಿಂದ ಮೆರೆದ ನಾಡು
ಕನ್ನಡ ಕಂಪ ಸೂಸುವ ಚಿನ್ನದ ನಾಡು
ಕವಿಪುಂಗವರು ಹಾಡಿ ಹರಸಿದ ನಾಡು
ಕನ್ನಡಿಗರೊಗಟ್ಟಿಗೆ ದುಡಿದ ಭವ್ಯ ನಾಡು
ಬುದ್ಧ,ಬಸವ, ಅಂಬೇಡ್ಕರರವರ
ಹಿತನುಡಿಗಳ ಕೇಳುತ ಬೆಳೆದವರು
ಕುಮಾರವ್ಯಾಸ ಕನಕ ಪುರಂದರರ
ಭವ್ಯ ಗಾಯನ ವಾಚನ ಸವಿದವರು
ಕನ್ನಡ ಕನ್ನಡಕ್ಕಾಗಿ ನಾಡ ನುಡಿ ರಕ್ಷಣೆ
ಮಾಡುವ ಸಂಕಲ್ಪ ಯಾತ್ರೆ ಮಾಡೋಣ
ಎಲ್ಲರ ಮನದಲಿ ಭಾಷಾಭಿಮಾನ ಬೆಳೆಸೋಣ
ಕನ್ನಡಾಂಬೆಯ ಸೇವೆಗೆ ಟೊಂಕಕಟ್ಟಿ ನಿಲ್ಲೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment