ಕವನದ ಶೀರ್ಷಿಕೆ
*ತ್ಯಾಗ ಬಲಿದಾನ*
ಸ್ವಾತಂತ್ರ್ಯ ಹೋರಾಟಗಾರರು ಕಲಿತನದಿ
ಮಾಡು ಇಲ್ಲವೇ ಮಡಿ ಎಂಬ ನುಡಿಗೆ
ಶಕ್ತಿ ತುಂಬಿ ತಮ್ಮ ಜೀವನದ ವ್ಯಾಮೋಹ
ತೊರೆದು ಭಾರತಾಂಬೆಯ ಸೇವೆಗೆ ಕಂಕಣ ಕಟ್ಟಿ
ನಾಡಗುಡಿಯ ರಕ್ಷಣೆಗಾಗಿ ಸಂಸಾರದ
ಬಂಧನ ಬಿಟ್ಟು ದೇಶ ಸೇವೆಯೇ ಈಶ ಸೇವೆ
ಎಂಬಂತೆ ಜೀವದ ಹಂಗು ತೊರೆದು ಹೋರಾಡಿ
ಮಡಿದ ಮಹಾನ್ ನಾಯಕರು ನಮ್ಮ ಹೆಮ್ಮ
ಸಾವಿರಾರು ಕೆಚ್ಚೆದೆಯ ವೀರ ಸೈನಿಕರು
ತ್ಯಾಗ ಬಲಿದಾನ ಮಾಡಿದ ಹೆಮ್ಮೆ ನಮ್ಮದು
ಗಾಂಧಿ ತಾತಾ ನೀವು ಚರಕ ಹಿಡಿದು ದೇಶದ
ರೈತರ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದರು
ಬಾಲ ಗಂಗಾಧರ ತಿಲಕ್, ಗೋಪಾಲ ಕೃಷ್ಣ ಗೋಖಲೆ
ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯರು
ಭಗತ್ ಸಿಂಗ್,ರಾಜಗುರು,ಸುಖದೇವ್, ಸುಭಾಷ್ ಚಂದ್ರ ಬೋಸ್ ಅವರ ತ್ಯಾಗ ಬಲಿದಾನದ ದೇಶ
ಕೆಚ್ಚೆದೆಯ ಹೋರಾಟಗಾರ ಅವಿರತ ಶ್ರಮ ಪಟ್ಟರು
ಭಾರತ ಮಾತಾ ಕೀ ಜೈ ಜೈಕಾರ ಹಾಕುತ್ತಾ ಹಾಕುತ್ತಾ
ಹುತಾತ್ಮರಾಗಿ ಮೆರೆದು ಕೀರ್ತಿ ಪತಾಕೆಯನ್ನು ಎತ್ತಿ
ಮುಗಿಲೆತ್ತರಕ್ಕೆ ಹಾರಿಸಿದ ವೀರರ ನಮ್ಮ ಹೆಮ್ಮೆಯ ನಾಡು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment