Tuesday, October 6, 2020

ಸ್ವರಚಿತ ಕವನ ೦೬/೧೦/೨೦೨೦

 ಕವನದ ಶೀರ್ಷಿಕೆ

*ಹಸಿದೊಡಲು*


ಹಸಿದೊಡಲು ಬಹಳೇ ಕೆಟ್ಟದು ಏಕೆಂದರೆ

ಮಾಡಬಾರದು ಮಾಡಿಸುವ ಸಾಧ್ಯತೆ ಹೆಚ್ಚು

ದುಡಿಯದೆ ಮೈಗಳ್ಳರನು ಒಡಲು ಸುಮ್ಮನೆ

ಹೇಗೆ ಬಿಡವುದು ಒಳ್ಳೆಯದು ಮಾಡಿದರೆ ಸರಿ


‌ಸ್ವಾಭಿಮಾನವ ಬಿಟ್ಟು ಬೇಡುವಂತೆ ಮಾಡುವ

ಕಳ್ಳತನ ಕೊಲೆ ಸುಲಿಗೆ ಅತ್ಯಾಚಾರ ಮಾಡಲು

ಹಿಂಜರಿಯದು ಭಯೋತ್ಪಾದಕ ಚಟುವಟಿಕೆ

ಕೆಲಸ ಮಾಡಲು ಸಿದ್ಧರಾಗುವಂತೆ ಮಾಡುವುದು


ಈ ಹಾಳು ಒಡಲು ಹಸಿಯದಿದ್ದಡೆ ಎಲ್ಲರೂ

ಆಯಾಗಿ ಇರುತ್ತಿದ್ದರು ಜನ ಒಬ್ಬರಿಗೊಬ್ಬರು

ಮಾತು ಕೇಳದೆ ಸ್ವಚ್ಛಂದವಾಗಿ ಬದುಕುತ್ತಿದ್ದರು

ಅದು ಒಂದು ರೀತಿಯ ಸಮಾಜಕ್ಕೆ ತೊಂದರೆ


ಅದಕ್ಕಾಗಿಯೇ ಹಸಿದೊಡಲನು ಖುಷಿ ಪಡಿಸಲು

ಕಾಯಕವೇ ಕೈಲಾಸ ಎಂಬಂತೆ ನಿಷ್ಠೆಯಿಂದಲೇ

ದುಡಿದು ಬಾಳಿನ ಸಾರ್ಥಕತೆಯನು ಪಡೆಯಲು

ಮನುಷ್ಯ ವಾಮಮಾರ್ಗದಿ ನಡೆಯದೆ ಬದುಕಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*೧೮೧ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೦೬.೧೦.೨೦೨೦* 

                   🌹🌹

 *ವಾರ-ಮಂಗಳವಾರ* 

                   🌻🌻

 *ವಿಷಯ-ಹಸಿದೊಡಲು* 

                   🌷🌷

 *ನಿರ್ವಹಣೆ-ಶ್ರೀಮತಿ ಸುಪ್ರೀತ್ ಎಸ್* *ಶೀಲವಂತ*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos