Sunday, October 25, 2020

ಸ್ವರಚಿತ ಕವನ ೨೫/೧೦/೨೦೨೦

 


ಕವನದ ಶೀರ್ಷಿಕೆ

*ಬನ್ನಿ ಬಂಗಾರ*


ದಸರೆಯು ಬಂದಿತು ನೋಡೋ

ಹಸನಾಗಿ ದೇವಿ ಪೂಜೆಯ ನೀ ಮಾಡೋ

ಹೊಸ ಹೊಸ ಕಾರ್ಯವ ನೀ ಮಾಡೋ

ಜಸ ಸಿಗುತದೆ ಪಕ್ಕಾ ಅದಕೆ ತಕ್ಕ ನೀ ದುಡಿಯೋ


ಜನರೆಲ್ಲ ಒಂದಾಗಿ ಕೊಡುವರು ಬನ್ನಿ ಬಂಗಾರ

ಅನುದಿನವು ಬಂಗಾರದಂತೆ ಬಾಳೋಣವೆಂದು

ಭಿನ್ನ ಭಾವನೆಯ ಬಿಟ್ಟು ಏಕತೆಯ ಪಠಿಸೋಣ

ಅನುರಾಗದ ಸಂಗಮವಾಗುವ ಕ್ಷಣವದು ನೋಡೋ


ಜಾತಿ ಮತ ಭೇದ ಭಾವ ಮನದಲಿ ಮೂಡದು

ಹಿತವನು ಬಯಸಿ ಆಶೀರ್ವಾದವ ಮಾಡುವರು

ಜತನದಿ ನೂರಾರು ಕಾಲ ಬಾಳೆಂದು ಹರಸುವರು

ಸತಿಸುತರಾದಿಯಾಗಿ ಆನಂದಿಸುವರು ಸಂಭ್ರಮದಿ


ಹಲವು ವರ್ಷಗಳ ವಿರಸ ದೂರಾಗುವವು ಪೂರಾ

ಕೆಲವು ವೈಮನಸ್ಸು ಬಿಟ್ಟು ಸಂತಸವ ಹಿಡಿಯೋ

ಒಲವೇ ಬದುಕಿನ ಗುಟ್ಟೆಂಬುದು ಅರಿತು ಬಾಳೋ

ಛಲ ಬಿಡದೆ ಸಾಧಿಸಿ ಜೀವನ ಪಯಣದಿ ಗೆಲ್ಲೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ









No comments:

Post a Comment

Videos