Friday, October 2, 2020

ಸ್ವರಚಿತ ಕವನ ೦೨/೧೦/೨೦೨೦

 ಕವನದ ಶೀರ್ಷಿಕೆ

*ಬಾಪು ಮೂಡಿಸಿದ ಛಾಪು*


ಸಣಕಲು ದೇಹದ,ಉದ್ದಮೂಗಿನ,ಬಟ್ಟಲು ಮುಖದ

ಹೊಳಪಿನ ಕಣ್ಣಿನ,ಸಾಮಾನ್ಯ ರೂಪಿನ,ಅಸಾಮಾನ್ಯ ವ್ಯಕ್ತಿತ್ವದ ತುಂಡು ಪಂಚೆಯ ವ್ಯಕ್ತಿ ಎಂದ ಕೂಡಲೇ

ಯಾರೂ ಮರೆಯಲಾರರು ಅವ್ರೆ ನಮ್ಮ ಬಾಪು


ದೇಶದ ಜನತೆಗೆ ನೆಚ್ಚಿನ ನಾಯಕನಾಗಿ

ಮುಂಚೂಣಿಯಲ್ಲಿ ಮುನ್ನೆಡೆದ ನೇತಾರ

ಮಾತಿನ ಮಂತ್ರ ಗಾರುಡಿಗ ಇವರ ನಡೆ

ಅನುಸರಿಸಿ ಬಂದರು ಲಕ್ಷಾಂತರ ಜನ 


ಸತ್ಯ ಅಹಿಂಸೆ ಇವರ ಭವ್ಯ ಬದುಕಿನ ಅಸ್ತ್ರ

ಭಾರತಾಂಬೆಯ ವಿಮೋಚನೆಗೆ ಇಡೀ

ಜೀವನವೇ ಮುಡುಪಾಗಿಟ್ಟು ಮಹಾತ್ಮ ಗಾಂಧಿ

ಎಂಬ ನಾಮಧೀ ಜನಮನದಲ್ಲಿ ಮೆರೆದಾತ


ಬಂಧೀಖಾನೆಯಲಿ ಬಂದಿದೆಯಾದರೂ ದೇಶದ

ಏಳ್ಗೆಗೆ ಸದಾ ಯೋಚಿಸುತ್ತಾ ಸಂಸಾರದ ಬಂಧನ

ತೊರೆದು ಬ್ರಿಟೀಷರ ವಿರುದ್ಧ ಸಿಡಿದೆದ್ದ ಜನಕ್ಕೆ

ಬೆನ್ನೆಲುಬಾಗಿ ಹೋರಾಡಲು ಟೊಂಕಕಟ್ಟಿ ನಿಂತವರು


ಸರಳ ಜೀವನ ಶೈಲಿ, ಉದಾತ್ತ ಚಿಂತನೆಗಳು

ಜಾತ್ಯಾತೀತ ಭಾವನೆ, ಸರ್ವೋದಯ,ಸತ್ಯಾಗ್ರಹ

ಸೇವೆಯ ಪ್ರತಿಫಲ ಸೇವೆ,ಸತ್ಯ,ಅಹಿಂಸೆ,ತ್ಯಾಗ

ಇವೆ ಬಾಪು ಮೂಡಿಸಿದ ಛಾಪು ಮರೆಯಲಾದೀತೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

🙏 *೧೭೭ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೦೨.೧೦.೨೦೨೦* 


🌸 *ವಾರ-ಶುಕ್ರವಾರ* 


🌷 *ವಿಷಯ-ಗಾಂಧೀ ಎಂಬ ಮಹಾತ್ಮ* 


🌻 *ನಿರ್ವಹಣೆ-ಶ್ರೀ ಖಂಡೂ ಬಂಜಾರ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*



No comments:

Post a Comment

Videos