Friday, October 16, 2020

ಸ್ವರಚಿತ ಕವನ ೧೬/೧೦/೨೦೨೦

 ಕವನದ ಶೀರ್ಷಿಕೆ

*ಅನ್ನ ಅಮೃತಕ್ಕೆ ಸಮಾನ*


ಅನ್ನ ಹೊಟ್ಟೆ ತುಂಬಿಸುವುದು ಅಣ್ಣಾ

ಅನ್ನ ಅಮೃತಕ್ಕೆ ಸಮಾನವಾದುದು

ತನ್ನಲ್ಲಿ ಎಷ್ಟು ಹಣವಿದ್ದರೂ ಕೂಡ

ತಿನ್ನಲು ಅನ್ನವೇ ಬೇಕು ಹಣವಲ್ಲವೋ


ರೈತರು ತಾವು ದುಡಿದು ಬೆಳೆ ಬೆಳೆದಾಗ

ಮಾತ್ರ ಎಲ್ಲರೂ ತಿನ್ನಲು ಬರುವುದು

ಸತತ ಪರಿಶ್ರಮ ಅಗತ್ಯ ಹೊರತುಪಡಿಸಿ

ಮತ್ತೆಲ್ಲೂ ಅಂಗಡಿಗಳಲ್ಲಿ ಸಿಗುವುದಿಲ್ಲ


ಪರಮ ಪವಿತ್ರವಾದ ಅನ್ನದ ಅಗುಳನು

ಮರೆಯದೆ ಗೌರವಿಸಬೇಕು ಜಗದಾಗ

ಕರದಲಿ ತಟ್ಟೆಯ ಹಿಡಿದು ತಿಂದರೆ ದೇಹಕ್ಕೆ

ಶರವೇಗದಲ್ಲಿ ಶಕ್ತಿಯ ಲಭಿಸುವುದು 


ರೊಕ್ಕ ಸಿಗುವುದೆಂಬ ಬರದಲಿ ಜನರು

ಸಿಕ್ಕ ಸಿಕ್ಕ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿ

ತಕ್ಕುದಾದ ಜೀವನದ ಬಂಡಿ ಸಾಗಿಸಿದರೆ

ಚಿಕ್ಕ ಹಳ್ಳಿಯ ವ್ಯವಸಾಯ ಮಾಡೋರು ಯಾರ


ಸುಮ್ಮನೆ ಮನೆಯಲ್ಲಿ ಕುಳಿತು ಅರಚುತ

ಒಮ್ಮೆಯು ಹೊಲದಲಿ ದುಡಿಯದ ಬಳಿಕ

ನೆಮ್ಮದಿಯಾಗಿ ತಿನ್ನಲು ಬರುವುದೇ ಅನ್ನ

ಹಮ್ಮು ಬಿಮ್ಮು ಬಿಟ್ಟು ದುಡಿದರೆ ಮಾತ್ರ ಅನ್ನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ** 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*


 *೧೯೧ ನೇ ಗೋಷ್ಠಿ* 

 *ದಿನಾಂಕ-೧೬.೧೦.೨೦೨೦* 

 *ವಾರ-ಶುಕ್ರವಾರ* 

 *ನಿರ್ವಹಣೆ ಶ್ರೀ ಹಾಲೇಶ ಹಕ್ಕಂಡಿ* 

 *ವಿಷಯ-* *ಅನ್ನವೆಂಬ ಪರಭ್ರಹ್ಮ* 

 *ಕವಿತೆ ೧೬ ರಿಂದ ೨೦ ಸಾಲಿರಲಿ*


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*








No comments:

Post a Comment

Videos