Saturday, October 3, 2020

ಸ್ವರಚಿತ ಕವನ 03/10/2020

 ಕವನದ ಶೀರ್ಷಿಕೆ

*ಪ್ರಾಮಾಣಿಕತೆಯ ಮೂರ್ತಿ ಶಾಸ್ತ್ರೀಜಿ*


ವಾರಣಾಸಿಯ ಸಮೀಪದ ಒಂದು ಹಳ್ಳಿಯಾದ

ಮುಘಲ್ ಸಾರಾಯಿಯಲಿ ಜನಿಸಿದ ಮಗುವೇ

ಲಾಲ್ ಬಹದ್ದೂರ್ ಶಾಸ್ತ್ರಿ ಎಂಬ ಭಾರತಾಂಬೆಯ

ಕಿರು ದೇಹದ ಚಾಣಾಕ್ಷ ಚತುರ ಬುದ್ಧಿ ನೇತಾರ


ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಮೇಲೆ

ಮಾವನ ಆಶ್ರಯದಿ ಶಿಕ್ಷಣ ಪಡೆದು ತಮ್ಮ ಉಜ್ವಲ

ಭವಿಷ್ಯ ಬಡತನದ ಬೇಗೆಯಲ್ಲಿ ಬೇಯುತ್ತಲೇ ಓದಿ

ಮಾನವೀಯ ಮೌಲ್ಯಗಳನು ಒಗ್ಗೂಡಿಸಿಕೊಂಡವರು


ಅಸಹಕಾರ ಚಳವಳಿಯಲಿ ಭಾಗಿಯಾಗಿ ಜೈಲು

ಸೇರಿ ಸ್ವಾತಂತ್ರ್ಯ ಹೋರಾಟ ಚಳುವಳಿಯ ರುಚಿಯ

ಅನುಭವವಾಗಿ ಇನ್ನೇನು ಶಿಕ್ಷಣ ಕೊನೆಗೊಮ್ಮೆ ಆತ

ಮರಳಿ ಕಾಶಿ ವಿದ್ಯಾಪೀಠದಿ ಶಾಸ್ತ್ರಿ ಪದವಿ ಪಡೆದರು


ದೇಶದ ಇತಿಹಾಸದಲಿ ಪ್ರಧಾನಿಯಾಗಿದ್ದು ಬಡತನ

ಅನುಭವಿಸಿದ ಜಗತ್ತಿನ ಮೊದಲ ವ್ಯಕ್ತಿ ಎಂಬ ಪ್ರತೀತಿ

ಆಹಾರ ಸಮಸ್ಯೆ ತಲೆದೋರಿದಾಗ ಸೋಮವಾರದ

ಉಪವಾಸಕ್ಕೆ ಇಡೀ ಜನ ಸಮೂಹ ಧ್ವನಿಗೂಡಿತ್ತು


ಕಾರು ಖರೀದಿಸಿದರು ಕಂತು ಕಟ್ಟದಾದರು ನೋಡಿ

ರೈಲು ದುರಂತಕೆ ಹೊಣೆಹೊತ್ತು ರಾಜಿನಾಮೆ ನೀಡಿದ

ಮಹಾನಿಯರ ವಿನಮ್ರತೆ,ಸಹಿಷ್ಣುತೆ,ದೃಢನಿಶ್ಚಯದ 

ಪ್ರಾಮಾಣಿಕತೆಯ ಮೂರ್ತಿ ಶಾಸ್ತ್ರೀಜಿ ನಮಗೆ ಮಾದರಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಯರಗೋಳ ತಾ.ಜಿ. ಯಾದಗಿರಿ


🙏 *೧೭೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೦೩.೧೦.೨೦೨೦* 


🌸 *ವಾರ-ಶನಿವಾರ* 


🌷 *ವಿಷಯ-ಲಾಲ್ ಬಹಾಧ್ದೂರ್ ಶಾಸ್ತ್ರೀ ಎಂಬ ಪ್ರಮಾಣಿಕತೆ* 


🌻 *ನಿರ್ವಹಣೆ-ಶ್ರೀನಾಗಭೂಷಣ ಅಯ್.ಎಸ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





No comments:

Post a Comment

Videos