ಕವನದ ಶೀರ್ಷಿಕೆ
*ಪ್ರಾಣಿ ದಯೆ*
ಮೂಕ ಪ್ರಾಣಿಗಳು ನಂಬಿಕೆಯ ನೆಂಟರು
ಮಮತೆಯ ತೋರಿದರೆ ಹಿಂಬಾಲಿಸಿ ಬರುವವು
ಸಮಯಕ್ಕೆ ತಕ್ಕಂತೆ ಸ್ವಲ್ಪ ಗದರಿಸಿದರೆ ಸಾಕು
ಸುಮ್ಮನೆ ಬಾಲ ಮುದುರಿಕೊಂಡು ಇರುವವು ಸಂಗಡ
ಹೊಸಬರನು ನೋಡಿ ಹೂಂಕರಿಸುವವು ನನ್ಗೆ
ಇವರ ಪರಿಚಯವಿಲ್ಲ ಇವನ್ಯಾರೋ ಹೊಸಬ
ಬಂದಿಹನೆಂದು ಸೂಚನೆಯ ನೀಡುವವು ಗೊತ್ತಿರುವ
ವ್ಯಕ್ತಿಯಾದರೆ ಬಾಲ ಅಳ್ಳಾಡಿಸಿ ಪ್ರೀತಿಯ ತೋರುವವು
ಮನೆಗೆ ಕಾವಲುಗಾರನಾಗಿ ಗೆಳೆಯನಂತೆ ನಮ್ಮ
ಜೊತೆಗೂಡಿ ಸಾಗುವವು ನಿರಂತರ ನಮ್ಮೆಡೆಗೆ
ನಮಗೆ ಆಪತ್ಕಾಲದಲ್ಲಿ ಸ್ವಯಂ ಸೇವಕರಂತೆ
ಸಹಾಯ ಮಾಡುವ ಗುಣ ಮನುಜನಿಗಿಂತ ಮೇಲು
ಸದಾ ನಮ್ಮಯ ಒಳಿತಿಗಾಗಿ ಮಿಡಿಯುವ ಹೃದಯ
ಮಾತು ಬಾರದ ಪ್ರಾಣಿಗಳಿರಲು ಮಾತು ಬಂದರೂ
ಬೇರೆಯವರ ಭಾವನೆಗೆ ಬೆಲೆ ನೀಡದೆ ನೋವುಂಟು
ಮಾಡುವದು ಬಿಟ್ಟು ಪ್ರಾಣಿ ದಯೆ ನಾವು
ಪಾಲಿಸಿದರಾಗದೆ.
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
🙏 *೧೭೮ ನೇ ಕವಿಗೋಷ್ಠಿ*
✍️ *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻
🌹 *ದಿನಾಂಕ-೦೪.೧೦.೨೦೨೦*
🌸 *ವಾರ-ರವಿವಾರ*
🌷 *ವಿಷಯ-ಪ್ರಾಣಿ ದಯೆ*
🌻 *ನಿರ್ವಹಣೆ-ಶ್ರೀಮತಿ ಐ ಜಯಮ್ಮ ಮತ್ತೀಹಳ್ಳಿ*
೧. ಕವಿತೆ ೧೬ ರಿಂದ ೨೦ ಸಾಲಿರಲಿ
೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)
೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*
೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ
೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ
೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.
೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ
೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment