ಕವನದ ಶೀರ್ಷಿಕೆ
*ಸಂತೃಪ್ತಿಯ ಜೀವನ*
ಮಾನವ ತನ್ನಲ್ಲಿ ಎಲ್ಲಾ ಇದ್ದರೂ ನೆಮ್ಮದಿ ಇಲ್ಲ
ಕನಕ,ಬೆಳ್ಳಿ,ವಜ್ರ, ವೈಢೂರ್ಯ,ಸಕಲ ಸಂಪತ್ತು
ಏನೇನು ಬೇಕೋ ಅಷ್ಟು ಇದ್ರೂ ಕೂಡ ಸಾಕು
ಎನ್ನುವ ಮಾತೇ ಅವನ ಬಾಯಿಂದ ಬಾರದು
ಬರಿಗಾಲಲ್ಲಿ ನಡೆವ ಮನುಜಗೆ ಚಪ್ಪಲಿ ಬೇಕು
ಸೈಕಲ್ ಮೇಲೆ ಸವಾರಿ ಮಾಡುವವಗೆ ಬೈಕು
ಬೈಕ್ ಇದ್ದರೆ ಕಾರಿನೊಳಗೆ ಕೂಡುವ ತವಕ
ಕಾರ್ ಇದ್ದರೆ ಆಕಾಶದಿ ಸಂಚರಿಸುವ ಬಯಕೆ
ಮನೆಯ ಪಕ್ಕದವರು ಏನೇನು ತರುವರೋ
ತಾನು ತರಬೇಕು ಅವರ ಸಮ ಬಾಳುವ ಹಠ
ಮನೆಯಿಲ್ಲದ ಮನುಜಗೆ ಮನೆಕಟ್ಟುವ ಛಲ
ಮನೆ ಮಕ್ಕಳ ಕಲ್ಯಾಣ ಬಗ್ಗೆಯೂ ಯೋಚನೆ
ಹೀಗೆ ಸಂಸಾರದ ಬಂಧನ ಬಿಡಿಸಲಾಗದ ನಂಟು
ಮಗ ಮಗಳು ಮಡದಿ ಕುಟುಂಬದ ಕಗ್ಗಂಟು
ಸಾಗುವನು ಜೀವನ ಪಯಣದಿ ನೆಮ್ಮದಿ ಬಿಟ್ಟು
ಜಗ್ಗದೆ ಕುಗ್ಗದೆ ಸಂತೃಪ್ತಿಯು ಇಲ್ಲದೆ ಕಂಗೆಟ್ಟು
ಅದಕ್ಕಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಗುಣ
ಸದ್ಯದ ಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ನಡೆಸಿ
ಬದುಕು ಹಸನಾಗಿಸಲು ತಕ್ಕ ಹವ್ಯಾಸ ರೂಢಿಸಿ
ಮದ ಮತ್ಸರ ರಹಿತ ಸಂತೃಪ್ತಿ ಜೀವನ ನಡೆಸೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment