Wednesday, October 28, 2020

ಸ್ವರಚಿತ ಕವನ ೨೮/೧೦/೨೦೨೦

 ಕವನದ ಶೀರ್ಷಿಕೆ

*ಸುಗ್ಗಿಯ ಸಿರಿ ಸೊಬಗು*

(ಸಾಹಿತ್ಯ ಪ್ರಕಾರ - ರುಬಾಯಿ)


ಸುಗ್ಗಿ ಬಂದೈತೆ ನೋಡವ್ವ

ಸೊಬಗು ತಂದೈತೆ ಕೇಳವ್ವ

ಊರ ಜನರೆಲ್ಲಾ ಒಂದಾಗಿ

ಹರುಷವ ತುಂಬೈತೆ ಕಾಣವ್ವ


ಮೂಡಲ ಹೊಡೆಯುವದರೊಳಗಣ್ಣಾ

ಹೊಲದಲ್ಲಿ ಕೆಲಸವ ಮಾಡಬೇಕಣ್ಣ

ಸಂಜೆಯ ಹೊತ್ತು ಮುಳುಗುವ ತನಕ

ರಾಶಿಯ ಮಾಡಿ ಹಸನು ಮಾಡಣ್ಣ


ತೆನೆಗಳ ಒಗ್ಗೂಡಿಸಿ ಹೊರೆಯ ಕಟ್ಟಿ

ಹೆಂಗೆಳೆಯರೆಲ್ಲ ಪದಗಳ ಕಟ್ಟಿ

ಹಾಡುವ ಸೊಬಗು ನೋಡಲು ಇಲ್ಲಿ

ಕಣ್ಣೆರಡು ಸಾಲದೆ ಮನ ತಟ್ಟಿ


ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾ

ನಾಟ್ಯದಿ ನಟಿಸಿ ಮನಸೆಳೆಯುತ್ತಾ

ಬರುವರು ನಮ್ಮ ಯುವ ಜನರು

ಬಿಡದೆ ಸುಗ್ಗಿಯ ಹಿಗ್ಗು ಪಡೆಯುತ್ತಾ


ವರುಷದ ಹರುಷ ಸುಗ್ಗಿಯ ತಂದೈತೆ

ಬಡವರ ಬದುಕಿಗೆ ಬೆಳಕಾಗಿ ಬಂದೈತೆ

ಧನ ದಾನ್ಯವ ಸಂಗ್ರಹಿಸುವರು ನೋಡೋ

ಸುಗ್ಗಿಯ ಸಿರಿ ಸೊಬಗು ತುಂಬೈತೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ* 

          🌺🌺

 *೨೦೩ ನೇ ಗೋಷ್ಠಿ* 

ದಿನಾಂಕ-೨೮.೧೦.೨೦೨೦, ಬುಧುವಾರ

ನಿರ್ವಹಣೆ- *ಶ್ರೀಮತಿ ಜ್ಯೋತಿಕೃಷ್ಣನಾಯ್ಕ* 

ವಿಷಯ- *ಸುಗ್ಗಿ,ಪ್ರಕಾರ- ರುಬಾಯಿ* 

ನಾಲ್ಕು ಅಥವಾ ಐದು ರುಬಾಯಿ ಬರೆಯಿರಿ

         ☘️☘️


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*






No comments:

Post a Comment

Videos