ಕವನದ ಶೀರ್ಷಿಕೆ
*ಅಂತರಾಳದ ಮೃದಂಗ*
ಮನದಲ್ಲಿ ನೂರಾರು ಭಾವನೆಗಳು
ಯೋಚನೆಗಳು ಹಲವು ತಕತೈ ಎಂದು
ಹೊಯ್ದಾಟ ಮಾಡುತ್ತಿರುತ್ತವೆ ಒಂದೇ
ಸಮನೆ ನಿರ್ಧಾರಕ್ಕೆ ಬರಲು ಹಾಗದು
ಒಳಿತು ಕೆಡುಕುಗಳ ನಡುವೆ ತಿಕ್ಕಾಟ
ಒಳಿತೋ ಕೆಡಕೋ ಯಾವುದು
ತಿಳಿಯುತಿಲ್ಲ ಮನದ ನಡುವೆ ನಡೆವ
ಗೋಳಾಟ ಯಾರ ಮಾತನ್ನೂ ಕೇಳದು
ಪಶ್ಚಾತ್ತಾಪದಿಂದ ಬೆಂದವನು
ನಾನಾ ತರದಿ ಯೋಚ್ನೆ ಮಾಡಿ
ಮಾಡಿ ಅವನ ಮನಕೆ ಅವನ
ಉತ್ತರ ನೀಡಲು ಒದ್ದಾಡುವನು
ತಪ್ಪು ಮಾಡಿದ ಮನುಜನಿಗೆ
ಹಸೆ ಮಣೆ ಏರುವ ವ್ಯಕ್ತಿಗೆ ಸತ್ಯವನು
ಮುಚ್ಚಿ ಸುಳ್ಳನು ಹೇಳುವವನ ಮನದಲಿ
ಅಂತರಾಳದ ಮೃದಂಗ ಬಡಿಯುತ್ತಿರುವುದು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment