ಕವನದ ಶೀರ್ಷಿಕೆ
*ನೀನು ಬಂದ ಮೇಲೆ*
ನೀನು ಮಡದಿಯಾಗಿ ಮನೆ ಸೇರಿದ ಮೇಲೆ
ಕೂಡಿದ್ದ ಸಂಸಾರ ಆಯಿತು ಎರಡು ಹೋಳಾ
ಅಣ್ಣತಮ್ಮಂದಿರ ಮಧ್ಯೆ ಇರಲಿಲ್ಲ ಭೇದಭಾವ
ನಿಮ್ಮಿಂದ ಬೇರೆ ಬೇರೆ ಆದೇವು ನೋಡಾ....!
ನಿಮ್ಮ ತಂದೆ ತಾಯಿ ಅಂದ್ರೆ ಪ್ರಾಣ ನಿಂಗೆ
ಅದೇ ಅತ್ತೆ ಮಾವಂದಿರೆಂದರೇ ತಾತ್ಸಾರವೇ
ಸವಿ ಮಾತಿಂದ ಓಣಿಯವರೊಡನೆ ಕಳೆವೆ ಕಾಲ
ಆದರೆ ಮನೆಯರೊಂದಿಗಿಲ್ಲ ಮಾತುಕತೆ..!
ಮಕ್ಕಳು ಮರಿ ಆದರು ನೋಡಾ ಅವರವರ
ಪ್ರೀತೀಲಿ ಮರೆತೆವು ಎಲ್ಲಾ ನೋವು ಕಷ್ಟಗಳ
ನೀ ಬಂದ ಮೇಲೆ ಬದಲಾವಣೆ ಆಯ್ತು ಅದೇ
ಚಿಕ್ಕ ಸಂಸಾರ ಚೊಕ್ಕ ಸಂಸಾರ ಎಂಬುದು ಕೇಳಾ...!
ಕೂಡಿ ಬಾಳಿದರೆ ಸ್ವರ್ಗ ಸುಖವೆಂಬುದ ತಿಳಿ
ಬಂಧನವು ಆಗುವುದು ಗಟ್ಟಿ ಗುರು ಹಿರಿಯರ
ಆದರ್ಶ,ನಡೆ,ನುಡಿ,ಆಚಾರ,ವಿಚಾರ,ಸಂಸ್ಕೃತಿ
ಇವೆಲ್ಲ ಬದುಕಿಗೆ ಬೆಳಕಾಗುವವು ನೋಡಾ....!
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
✍️✍️
*ಕವಿತಾ ಸಪ್ತಾಹ*
🌻🌻
*೧೯೫ನೇ ಗೋಷ್ಠಿ*
ದಿನಾಂಕ-೨೦.೧೦.೨೦೨೦
ವಾರ- ಮಂಗಳವಾರ
ನಿರ್ವಹಣೆ *-ಶ್ರೀ ನಿಸಾರ್ ಅಹಮದ್*
ವಿಷಯ - *ಬದಲಾವಣೆ*
ಕವಿತೆ ೧೬ ರಿಂದ ೨೦ ಸಾಲಿರಲಿ
🌺🌺
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment