ಶೀರ್ಷಿಕೆ
*ತುಂಟಾಟದ ನೆನೆಪು*
(ಜಡೆ ಕವನ)
ಹಿಗ್ಗಿದಾಗ ನೋಡು ಮಗುವಿನ ನಗು
ನಗುತಾ ನಗುತಾ ನಲಿ ನಲಿದಾಡುವುದು
ನಲಿದಾಡುತ್ತಾ ಆಡುತ್ತಾ ಮೈ ಮರೆಯುವುದು
ಮರೆತೆ ಬಿಡುವುದು ಆಟದಲಿ ಊಟವನು
ಊಟವನು ಮಾಡಿಸಲು ಮಗುವನ್ನು ಎತ್ತಿ
ಎತ್ತಿಕೊಂಡು ಚಂದಾ ಮಾಮಾ ಬಾರೋ
ಬಾರೋ ಬಾರೋ ಎಂದು ಹಾಡನು ಹಾಡಿ
ಹಾಡಿ ಹಾಡಿ ರಮಿಸುವದೇ ಅವಳ ಕಾಯಕ
ಕಾಯಕ ನಿಷ್ಠೆಯ ಮೂರ್ತಿಯೇ ತಾಯಿ
ತಾಯಿಯ ಋಣವ ತೀರಿಸಲು ಆಗದು
ಆಗದೇ ಹೋದರು ಕೊನೆಯಲ್ಲಿ ಅವರ
ಅವರವರ ಸೇವೆ ಮಾಡಿ ಇಳಿಸೋಣ ಬಾ
ಬಾಲ್ಯದ ತುಂಟಾಟಗಳ ನಂಟು ಅನಂತ
ಅನಂತ ಭಾವಗಳು ಬೆಚ್ಚಗೆ ಅವಿತಿವೆ
ಅವಿತಿರುವ ಮಧುರ ನೆನಪುಗಳ ಓಲೆಯ ಕೆದಕೆ
ಕೆದಕಿದರೆ ಎಲ್ಲರ ಬಾಲ್ಯವು ಸವಿ ನೆನಪಾಗುವುದು
ನೆನಪಾದಾಗಲೆಲ್ಲ ಏನೋ ಒಂತಾರ ನಾವು
ನಾವೆಲ್ಲ ಹೇಗಿದ್ವಿ ಎಲ್ಲೆಲ್ಲೋ ಸುತ್ತಾಡಿದ್ದು
ಸುತ್ತಾಡತ ಮನೆಗೆ ಬಾರದೆ ಅಮ್ಮ ಬೈಯ್ದುದ್ದು
ಬೈದು ಮತ್ತೆ ರಮಿಸಿದಾಗ ಆಗುವುದು ಹಿಗ್ಗು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ.ಯಾದಗಿರಿ
*ಬಂಧುಗಳೆ*
*ಜಡೆ ಪ್ರಕಾರದ ಮಾಹಿತಿ*
ಈ ಕಲಿಕೆಯ ಪಯಣದಲ್ಲಿ ಹೊಸ ಪ್ರಕಾರವೊಂದನ್ನು ಪರಿಚಯ ಮಾಡಿಕೊಳ್ಳುವ, ನಿಮ್ಮ ಜೊತೆ ಜೊತೆಯಲ್ಲೇ ಕಲಿಯುವ ಇಚ್ಛೆ ನನ್ನದು.
ಯಾವುದು ಅದು ಅಂತೀರಾ ಅದೇ *ಜಡೆ ಕವನ* ಏನಿದು ಜಡೆ ಕವನ? ಜಡೆಗೂ ಕವನಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ??? ಹೌದು ಹೆಸರೇ ಸೂಚಿಸುವಂತೆ ಜಡೆ ಮಾದರಿಯಲ್ಲಿ ಕವನ ಹೆಣೆಯುತ್ತಾ ಸಾಗುವುದು..ಹೇಗೆ??
👉ಕವಿತೆಯ ಆರಂಭದ ಪದ ಹಾಗೂ ಕವಿತೆಯ ಅಂತ್ಯದ ಪದ ಒಂದೇ ಆಗಿರಬೇಕು ಅಂದರೆ ಯಾವ ಪದದಿಂದ ಪ್ರಾರಂಭಿಸುವಿರೋ ಅದೇ ಪದ ದಿಂದ ಆಂತ್ಯ ಮಾಡುವುದು.
👉 ಪ್ರತಿ ಚರಣದ ಕೊನೆ ಪದ ಮುಂದಿನ ಚರಣದ ಮೊದಲ ಪದವಾಗಬೇಕು
👉 ಮೊದಲ ಚರಣದ ಕೊನೆ ಪದದಿಂದ ಎರಡನೇ ಚರಣ ಆರಂಭ,ಎರಡನೇ ಚರಣ ಕೊನೆ ಇಂದ ಮೂರನೇ ಚರಣ ಹೀಗೆ ಕವನ ಕಟ್ಟುತ್ತಾ ಸಾಗಿದರೆ ಸಾಕು
👉 ಭಾವ ಪೂರ್ಣ ವಾಗಿರಬೇಕು. ಅರ್ಥ ಪೂರ್ಣ ಚರಣಗಳನ್ನು ಮಾಡಿ
ಇವಿಷ್ಟು ಮಾಡಿದರೆ ಸಾಕು.
ಉದಾಹರಣೆ
*ಪ್ರಳಯ ನರ್ತನ*
ಪ್ರಕಾರ : ಜಡೆ ಕವನ
ಸುಡುಸುಡು ಸುಡುತಿದೆ ವೈಶಾಖ ಬಿಸಿಲು
ಬಿಸಿಲ ಝಳಕೆ ಖಗ ಮೃಗ ತರುಲತೆ ಬಾಯಾರಿರಲು
ಬಾಯಾರಿ ಬಳಲಿದೆ ನೋಡು ತಿರೆಯ ಒಡಲು
ಒಡಲು ಬಿರಿದು ಉರಿಯೆದ್ದಿದೆ ಎಲ್ಲೆಡೆಯಲ್ಲೂ
ಎಲ್ಲೆಡೆಯಲ್ಲೂ ಬಿಸಿಲ ಉರಿ ಉರಿ ತಾಪ
ತಾಪವ ಕಳೆಯಲೋ ಅವನಿಯ ತಣಿಸಲೊ
ತಣಿಸಿ ಮಣಿಸಿ ಭೂರಮೆಯ ಸಿಂಗರಿಸಲು
ಸಿಂಗರಿಸಿ ಪೃಥಿವೀ ದೇವಿಯ ರಮಿಸಲು ವರುಣಾಗಮನ
ಆಗಮ ನಿಗಮ ಒಂದು ಗೂಡಿ ವರುಣನ ಆರ್ಭಟ
ಆರ್ಭಟದಬ್ಬರ ನೋಡಿದು ಪ್ರಕೃತಿ ಮುನಿಸೋ
ಮುನಿದ ಅವ್ವಾ ಇದೋ ಸರ ಸರ ಸೆಳೆಯುತಾ
ಸೆಳೆದು ಹೊತ್ತುಒಯ್ಯುತಿಹಳು ಮನುಜರ ಜೀವ
ಜೀವವ ಸೆಳೆಯಲು ಕಾರಣ ನಮ್ಮಯ ದಾಹ
ದಾಹಕೆ ಲೋಭಕೆ ಇದೋ ಮೈಲಿಗೆ ಆಯಿತು ಭುವಿಯು
ಭುವಿಯ ಬಸಿರ ಬೆದಕಿ ಹಿಸುಕಿ ಮಾಡಿರುವೆವು ಮಹಾ ಲೋಪ
ಲೋಪದ ಫಲವೇ ನೋಡು ಪ್ರಕೃತಿ ವಿಕೋಪ
ವಿಕೋಪದಿ ನೀಡಿಹಳು ಶಾಪವ ಸುಡುಸುಡುತ
*ಬರೀತೀರಾ ತಾನೇ*
ನಮಸ್ಕಾರಗಳು
🙏🙏ಸಂಧ್ಯಾ ರಾವ್
ಮೈಸೂರು
No comments:
Post a Comment