Monday, October 26, 2020

ಸ್ವರಚಿತ ಕವನ ೨೬/೧೦/೨೦೨೦

 ಕವನದ ಶೀರ್ಷಿಕೆ

*ಕನ್ನಡಿಗರ ಹೊಣೆ*

(ಟಂಕಾ ಪ್ರಕಾರ)


        ೧

ಕನ್ನಡ ನಾಡು

ನುಡಿ ನೆಲ ಸಂಸ್ಕೃತಿ

ಕಟ್ಟುವ ಕಾರ್ಯ

ಭರದಿಂದ ಸಾಗುವ

ಕಾಲ ಕೂಡಿಬಂದಿದೆ


         ೨

ಅನ್ಯ ಭಾಷೆಯ

ಪ್ರಭಾವದ ಸೆಳೆತ

ನಮ್ಮೆಲ್ಲರನು

ಆಕ್ರಮಿಸುವ ಮುನ್ನ

ಒಗ್ಗೂಡಿ ಹೋರಾಡೋಣ


             ೩

ನಮ್ಮತನವ

ನಾವು ಕಾಯದಿದ್ದರೆ

ಕನ್ನಡ ಭಾಷೆ

ಮರೆಯಾಗುವುದೇನೋ

ಹಾಗಾಗಿ ನಾವೆಲ್ಲರೂ


           ೪

ಕನ್ನಡಕ್ಕಾಗಿ

ನಮ್ಮ ಭಾಷೆಯ ಬಗ್ಗೆ

ಕಾಳಜಿ ಹೊಂದಿ

ಕನ್ನಡಿಗರೆಲ್ಲರೂ

ಕನ್ನಡ ಮಾತಾಡೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


*ಟಂಕಾ ಪ್ರಕಾರ*


ಐದು ಸಾಲಿನ ಒಂದು ಟಂಕಾ


ಮೊದಲಸಾಲು ಐದು ಅಕ್ಷರ

ಎರಡನೇ ಸಾಲು ಏಳು ಅಕ್ಷರ

ಮೂರನೇ ಸಾಲು ಐದು ಅಕ್ಷರ

ನಾಲ್ಕನೇ ಸಾಲು ಏಳು ಅಕ್ಷರ

ಐದನೇ ಸಾಲು ಏಳು ಅಕ್ಷರ

ಒಟ್ಟು ೩೧ ಅಕ್ಷರಗಳ ಒಂದು ಟಂಕಾ


ಅರ್ಥ ಕೆಡಬಾರದು ಶಿರೋನಾಮೆಗೆ ತಕ್ಕಂತೆ ಬರೆಯಬೇಕು







No comments:

Post a Comment

Videos