Monday, October 19, 2020

ಸ್ವರಚಿತ ಕವನ ೧೮/೧೦/೨೦೨೦

 ಕವನದ ಶೀರ್ಷಿಕೆ

*ಸುಳ್ಳಿನ ಸರಮಾಲೆ*


ಮಾತೆತ್ತಿದರೆ ಸಾಕು ಸುಳ್ಳೇ ಹೇಳುವರು

ಮೋಬೈಲ್ನಲ್ಲಿ ಮಾತಾಡುತ್ತಾ ಅಲ್ಲೀನಿ

ಇಲ್ಲೀನಿ ಎಂದು ಹೇಳುತ ತಿರುಗುತಲೇ

ಮೋಸ ಮಾಡಿದರೆ ನಂಬಲು ಹೇಗೆ ಸಾಧ್ಯ


ಬಣ್ಣದ ಮಾತಿನಿಂದ ಜನರನ್ನು ಮೋಡಿ

ಮಾಡುತಲಿರುವರು ನೀರಿದ್ದಲಿ ಕೇಸರಿಲ್ಲ

ಕೆಸರಿದ್ದಲಿ ನೀರಿಲ್ಲ ಎನ್ನುವ ಮಾತಿಲ್ಲವೇ

ನಂಬಿಕೆಯನ್ನು ಕಳೆದುಕೊಂಡಿರುವರು ಜನ


ಜನಕೆ ಮಂಕು ಬೂದಿ ಎರಚುತ ನಿನಗೆ

ಅದು ಮಾಡುವೆ ಇದು ಮಾಡುವೆನು

ನನಗೆ ದೊಡ್ಡವರ ಪರಿಚಯವಿದೆ ಎಂದು

ಹೇಳುತ ಹಣ ಲಪಟಾಯಿಸುವ ಸಂಚು ಇದೆ


ಇದರಿಂದ ವಿಶ್ವಾಸ ಕಳೆದುಕೊಳ್ಳುವರು ಜನ

ನೈಜತೆಯನ್ನು ಒಪ್ಪುತ್ತಿಲ್ಲ ಅವರ ಮನ

ಸುಳ್ಳಿನ ಸರಮಾಲೆಯಲಿ ಬದುಕುವ ಬದಲು

ಇದ್ದುದನ್ನು ಇದ್ದಂತೆ ಹೇಳುವದ ಕಲಿತರಾಗದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

             🇮🇳🇮🇳

 *೧೯೩ ನೇ ಗೋಷ್ಠಿ* 

ದಿನಾಂಕ-೧೮.೧೦.೨೦೨೦

ವಾರ-ಬಾನುವಾರ

ನಿರ್ವಹಣೆ- *ಶ್ರೀಹುಸೇನಪ್ಪ ಸಜ್ಯೋಲಿ* 

ವಿಷಯ- *ಸುಳ್ಳುಎಂಬ ಮೋಸ*


     *ಸೂಚನೆಗಳು*


👉🏻 *ಕವಿತೆ ೧೬ ರಿಂದ ೨೦ ಸಾಲಿರಲಿ*

👉🏻 *ಮುಂಜಾನೆ ೮ ಘಂಟೆಯಿಂದ ಸಂಜೆ ೬ ಘಂಟೆಯೊಳಗೆ ಕವನ ಹಾಕಿ*


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*



No comments:

Post a Comment

Videos