Sunday, October 18, 2020

ಸ್ವರಚಿತ ಕವನ ೧೭/೧೦/೨೦೨೦

 ಕವನದ ಶೀರ್ಷಿಕೆ

*ಅಹಂಕಾರವೆಂಬ ಅಜ್ಞಾನ*


ಅಹಂಕಾರವು ಮನುಜನ ಕೇಡಿನ ದಾರಿ

ಅಧಿಕಾರ,ಅಂತಸ್ತು,ವೈಭವ,ಬಂಗಾರ

ಅಹಂಕಾರಕ್ಕೆ ಮೂಲ ಇವುಗಳ ತೊರೆ

ನಿನ್ನಂತಹ ವ್ಯಕ್ತಿ ಇನ್ನೊಬ್ಬ ಇರಲಾರ


ವ್ಯಾಮೋಹ ಬಿಟ್ಟು ಸರಿ ದಾರಿಯಲ್ಲಿ ದುಡಿ

ನಿನ್ನ ನಂಬಿ ಹಲವು ಜನ ಬರುವರು ನೋಡ

ಪ್ರೀತಿ ಪ್ರೇಮವ ತೋರಿಸಿದರೆ ನೀನೇ ಬೇಡಾ

ಎಂದರೂ ಬಿಡದೆ ಹಿಂಬಾಲಿಸುವರು ನಿನ್ನ ಕಡೆ


ಜೀವನದಲ್ಲಿ ಕಳೆದುಕೊಳ್ಳುವದು ಏನಿಲ್ಲೋ

ಸವಿಮಾತು ಸ್ನೇಹ ಭಾವನೆ ತೋರೋ

ಅವನಿ ಕೊಟ್ಟರೂ ಸಿಗದ ವಾತ್ಸಲ್ಯದ ಪಥವೋ

ಯಾವುದೇ ಕಾರಣಕ್ಕೂ ಬಿಡದೆ ಪಡೆಯೋ


ಅಹಂಕಾರವೆಂಬ ಅಜ್ಞಾನವ ತೊರೆಯೋ

ಮಹಾ ಮಾನವತೆಯ ಬದುಕನು ಅರಿಯೋ

ಸಹಾಯ,ಸಹಕಾರ,ಸೌಹಾರ್ದತೆಯ ತೊರೋ

ಬಹಳ ಜನಪ್ರಿಯ ನಾಯಕನಾಗಿ ನೀ ಬಾಳೋ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ** 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*


 *೧೯೨ನೇ ಗೋಷ್ಠಿ*

 *ದಿನಾಂಕ-೧೭.೧೦.೨೦೨೦* 

 *ವಾರ-ಶನಿವಾರ* 

 *ನಿರ್ವಹಣೆ- *ಶ್ರೀಚನ್ನ ಕೇಶವ* *ಪವಾರ** 

 *ವಿಷಯ-* *ಅಹಂಕಾರವೆಂಬ ಅಜ್ಞಾನ*


*ಸೂಚನೆಗಳು*

👉🏻 *ಕವಿತೆ ೧೬ ರಿಂದ ಇಪ್ಪತ್ತು ಸಾಲಿರಲಿ*

👉🏻 *ತಮ್ಮ ಕವನಗಳನ್ನು ಮುಂಜಾನೆ ೮ ಗಂಟೆಯಿಂದ ಸಂಜೆ ೫ ಘಂಟೆಯೊಳಗೆ ಹಾಕಿ*


*ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*



 

No comments:

Post a Comment

Videos