Friday, October 9, 2020

ಸ್ವರಚಿತ ಕವನ ೦೯/೧೦/೨೦೨೦

 ಕವನದ ಶೀರ್ಷಿಕೆ

*ಸಮರ್ಪಣೆ*


ಹೆಂಡತಿಯ ಜೀವನ ಗಂಡನಿಗೆ ಸಮರ್ಪಣೆ

ತಂದೆ-ತಾಯಿಯ ಜೀವನ ಮಕ್ಕಳಿಗೆ ಸಮರ್ಪಣೆ

ಗುರುವಿನ ಜೀವನ ಶಿಷ್ಯರಿಗೆ ಸಮರ್ಪಣೆ

ಸೈನಿಕನ ಜೀವನ ದೇಶಕ್ಕೆ ಸಮರ್ಪಣೆ


ವೈದ್ಯರ ಜೀವನ ರೋಗಿಗಳಿಗೆ ಸಮರ್ಪಣೆ

ಸುಶ್ರುಕಿಯರ ಜೀವನ ಸೇವೆಗೆ ಸಮರ್ಪಣೆ

ರೈತನ ಜೀವನ ಭೂರಮೆಗೆ ಸಮರ್ಪಣೆ

ಕಾರ್ಮಿಕರ ಜೀವನ ದುಡಿಮೆಗೆ ಸಮರ್ಪಣೆ


ಜನರ ಭಕ್ತಿ ರಾಜನಿಗೆ ಸಮರ್ಪಣೆ

ಭಕ್ತರ ಭಕ್ತಿ ದೇವರಿಗೆ ಸಮರ್ಪಣೆ

ಶಿಷ್ಯರು ಗುರುವಿಗೆ ಗೌರವದ ಸಮರ್ಪಣೆ

ಸಮಾಜ ಸೇವಕರು ಜನ ಸೇವೆಗೆ ಸಮರ್ಪಣೆ


ಇಂತಪ್ಪ ವಿವಿಧ ಜನರ ಸಮರ್ಪಣೆ ನೋಡೋ

ಕಲಿಯುಗದಲ್ಲಿ ನಾಟಕೀಯತೆಗೆ ಬೆಲೆ ನೋಡೋ

ಯಾರು ಸಮಾಜದಲ್ಲಿ ಗೌರವಯುತ ಬಾಳುವರು ನೋಡೋ

ಅವರವರ ಯೋಗ್ಯತೆಗೆ ಜನ ಬೆಲೆ ಕೊಡುವರು ನೋಡೋ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

*೧೮೪ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೦೯.೧೦.೨೦೨೦* 

                   🌹🌹

 *ವಾರ-ಶುಕ್ರವಾರ* 

                   🌻🌻

 *ವಿಷಯ-ಸಮರ್ಪಣೆ* 

                   🌷🌷

 *ನಿರ್ವಹಣೆ-ಶ್ರೀ ನಾಗರಾಜ ಸಣ್ಣಪ್ಪ ಅರ್ಕಸಾಲಿ*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*







No comments:

Post a Comment

Videos