Thursday, October 22, 2020

ಸ್ವರಚಿತ ಕವನ ೨೨/೧೦/೨೦೨೦

 ಕವನದ ಶೀರ್ಷಿಕೆ

*ನನ್ನ ಕರ್ತವ್ಯ*


ಭಾರತಾಂಬೆಯ ಮಡಿಲಲ್ಲಿ ಜನಿಸಿದ ನಾನು

ನಾರಿ ಮಣಿಯರನ್ನು ಗೌರವಿಸುವದು ಮೊದಲು

ಶಿರಭಾಗುವುದು ಹೆತ್ತ ತಂದೆ ತಾಯಿಯಂದಿರಿಗೆ

ಗುರು ಹಿರಿಯರ ನಮಿಸೋದು ನನ್ನ ಕರ್ತವ್ಯ 


ಸರಕಾರಿ ಆಸ್ತಿ-ಪಾಸ್ತಿಯನ್ನು ರಕ್ಷಿಸುವುದು ತಿಳಿದು

ನೆರೆ ಹೊರೆಯವರೊಂದಿಗೆ ಸಹಬಾಳ್ವೆ ಬಾಳೋದು

ಸರಳತೆಯ ಜೀವನವನ್ನು ನಡೆಸುದನು ಕಲಿತು

ಮರೆಯದೆ ಮತದಾನ ಮಾಡುವದು ನನ್ನ ಕರ್ತವ್ಯ


ಮಮಕಾರ ಪ್ರೀತಿ ವಾತ್ಸಲ್ಯ ಮಕ್ಕಳಿಗೆ ತೋರುವದು

ಸಮತೆಯಿಂದ ಅವರ ಸಮಸ್ಯೆಗಳನು ಆಲಿಸುವುದು

ಸಮಯ ಪರಿಪಾಲನೆಯ ರೂಢಿ ಮಾಡಿಕೊಳ್ಳುವುದು

ಸಮಾನತೆಯ ತತ್ವ ಸಾರುವುದೇ ನನ್ನ ಆದ್ಯ ಕರ್ತವ್ಯ


ಸತ್ಯ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು

ಹಿತಮಿತ ಆಹಾರ ‌ಸೇವಿಸುತ ಅನ್ನದ ಬೆಲೆ ಅರಿತು

ಸತಿಯ ಹಿತ ಆಲಿಸಿ ಅವಳ ಮಾತಿಗೆ ಬೆಲೆ ಕೊಡುತ

ಜಾತಿ ಮತ ಭೇದ ಮಾಡದಿರೋದು ನನ್ನ ಕರ್ತವ್ಯ


ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈಮುಗಿವದು

ದೇಶ ಕಾಯುವ ಯೋಧರನು ತಪ್ಪದೆ ನಮಿಸುವುದು

ಹಸನಾಗಿ ಊಳುವ ಯೋಗಿ ರೈತರನು ನೆನೆಯೋದು

ಹೊಸ ಅನುಭವದಿ ಜೀವನ ಸಾಗಿಸುವದು ನನ್ನ ಕರ್ತವ್ಯ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

           🌻🌻

 *೧೯೭ನೇ ಗೋಷ್ಠಿ* 

ದಿನಾಂಕ-೨೨.೧೦.೨೦೨೦

ವಾರ-ಗುರುವಾರ

ನಿರ್ವಹಣೆ *-ಶ್ರೀ ಗಿರೀಶ್ ಪೂಜಾರ್* 

ವಿಷಯ- *ನನ್ನ ಕರ್ತವ್ಯ

ಕವಿತೆ ೧೬ ರಿಂದ ೨೦ ಸಾಲಿರಲಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*







No comments:

Post a Comment

Videos