ಕವನದ ಶೀರ್ಷಿಕೆ
*ನೆರವಿನ ಭರವಸೆ*
(ಭೋಗ ಷಟ್ಪದಿ)
ನೆರೆಯು ಬಂದು ನರನ ಜನ್ಮ
ನೆರವಿನ ಭರವಸೆಗೆ ಕಾದು
ಕರವ ಮುಗಿದು ಬೇಡಿದರು ಸಹಾಯ ಮಾಡಲು
ಬರುವುದಿಲ್ಲ ಯಾರು ಮುಂದೆ
ಬರಿದೆ ಆಸೆ ಆಮಿಷಗಳ
ತೋರಿ ತಮ್ಮ ಬಯಕೆಗಳನು ತೀರಿಸಲು ಸದಾ
ಅವಣಿಸುವರು ನೋಡಿ ಇವರು
ಯಾವ ತರದಿ ಜನರ ನಡುವೆ
ಸೇವೆ ಮಾಡಿ ದುಡ್ಡು ಹೊಡೆವ ಸಂಚು ರೂಪಿಸಿ
ದೈವದವರು ಮೆಚ್ಚುವಂತೆ
ಭಾವದಲ್ಲಿ ಭಕ್ತಿ ಬಿಟ್ಟು
ಸೇವೆಯ ಹೆಸರಿನಲಿ ವಂಚಿಸುವದನು ಬಿಡು ನೀ
ಮನೆ-ಮಠವನು ಕಳೆದು ಕೊಂಡ
ಜನರು ಬೀದಿ ಪಾಲು ಆದ
ಮನುಜರಿಗೆ ಮೊದಲು ನೆಲೆ ಸಿಗಲೆಂದು ಹರಸುತ
ಧನ ಕನಕವ ಬೇಡರು ಕೆಲ
ದಿನದವರೆಗೆ ಊಟ ತಿಂಡಿ
ಇನ್ನು ವಸತಿ ಮಾತ್ರ ಮಾಡಿ ನೆನೆಯುವರು ಸದಾ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌸🌸
*ಗೋಷ್ಠಿ-೨೦೫*
*ದಿನಾಂಕ-೩೦.೧೦.೨೦೨೦*
*ವಾರ-ಶುಕ್ರವಾರ*
*ವಿಷಯ-ನೆರವು*
*ಪ್ರಕಾರ-ಆದಿಪ್ರಾಸ*
*ನಿರ್ವಹಣೆ-ಶ್ರೀಜ್ಯೋತಿನಾಯ್ಕ*
🌸🌸
ಕವಿತೆ ೧೮ ಸಾಲಿರಲಿ
*ಆದಿಪ್ರಾಸ*
ಆರು ಸಾಲಿನ ಮೂರು ಪದ್ಯ ಬರೆಯಬೇಕು
ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು
*ಉದಾಹರಣೆ*
ಸ ತ್ತ ವರ ಕಥೆಯಲ್ಲ ಜನನದಿ
ಕು ತ್ತ ದಲ್ಲಿ ಕುದಿಕುದಿದು ಕರ್ಮದಿ
ಕ ತ್ತ ಲೆಯ ಸೀಮೆಗರ ಸಿಲುಕುವರು
ಇಲ್ಲಿ ಸಾಲಿನ ಎರಡನೇ ಅಕ್ಷರ
ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ
ಮಂಡಿತವಾಗಬೇಕು
ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
ಗೋಷ್ಠಿಯ ಮದ್ಯೆ ಬೇರೆ ಏನನ್ನೂ ಹಾಕಬಾರದು
*ಮಧುನಾಯ್ಕ.ಎಲ್*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment