Sunday, October 11, 2020

ಸ್ವರಚಿತ ಕವನ ೧೧/೧೦/೨೦೨೦

 *ಪೌರ್ಣಿಮಾ ಸಾಹಿತ್ಯ ವೇದಿಕೆ, ಸಿದ್ದಾಪುರ. ಜಿಲ್ಲೆ - ಉತ್ತರ ಕನ್ನಡ*


*ರಾಜ್ಯ ಮಟ್ಟದ ಆನ್ಲೈನ್ ಕವನ ಸ್ಪರ್ಧೆ*


*ವಿಷಯ- ಎಸ್ ಪಿ ಬಾಲಸುಬ್ರಹ್ಮಣ್ಯಂ ರ ಕನ್ನಡ ಸೇವೆ*

 

ಕವನದ ಶೀರ್ಷಿಕೆ

*ಕನ್ನಡ ಸೇವೆ*


ಕನ್ನಡ ಸಾಹಿತ್ಯ ಶ್ರೀಮಂತಿಯನ್ನು ಎತ್ತಿಹಿಡಿದು

ತನ್ನದೆ ಧ್ವನಿ ಕಂಠದ ಮೂಲಕ ಸವಿರುಚಿಯನು

ಚನ್ನುಡಿಯನು ಜಗಕೆ ಪರಿಚಯ ಮಾಡಿದವರು

ಕನ್ನಡ ನುಡಿ ಸುಲಲಿತವಾಗಿ ಹಾಡಿದ ಹಾಡುಗಾರ


ಬಾರಿಸು ಕನ್ನಡ ಡಿಂಡಿಮವ ಎನ್ನುವಂತೆ 

ಮನೆಮನೆಯಲ್ಲಿ ನಿನಾದವ ಒಡಮೂಡುವಂತೆ

ಸಿರಿಗನ್ನಡ ನುಡಿ ನರನಾಡಿಗಳಲ್ಲಿ ರಾರಾಜಿಸುವಂತೆ

ಹಲವು ಚಂದನ ವನದ ತಾರೆಯರು ಬೆಳಗುವಂತೆ


ರವಿ ಕಾಣದ್ದು ಕವಿ ಕಂಡ ಎಂಬ ಭಾವದಿ

ಸವಿನುಡಿಯ ಮೂಲಕ ಜನರು ಗುನುಗುವ

ಭಾವ ಕಂಡು ಬರುತ್ತದೆ ಜನ ಮೆಚ್ಚುಗೆ ಪಡೆದ

ಕವಿಪುಂಗವರ ಹೆಸರು ಪಸರಿಸುವ ಕೆಲಸ ಮಾಡಿದರು


ಓ...! ಎಸ್ಪಿ ಬಾಲಸುಬ್ರಹ್ಮಣ್ಯಂ ಗುರುಗಳೇ ಇದೋ ಕನ್ನಡಿಗರ  

ಕೋಟಿ ನಮನ ನಿಮಗೆ ತಮ್ಮ ನುಡಿಸಿರಿ ಕಂಠದಲ್ಲೇ        ಕನ್ನಡಾಂಬೆಯ ನಾಡಲಿ*ಕನ್ನಡ ಸೇವೆ*ಗೈದು                      ಸಾವಿರಾರು ಹಾಡುಗಳ ಮೂಲಕ ಕೀರ್ತಿ ಪತಾಕೆಯನ್ನು 


ಮುಗಿಲೆತ್ತರಕ್ಕೆ ಹಾರಿಸಿ ಹಾಡು ಹಾಡುತ ನಾಡಲಿ

ಸಂಭ್ರಮ ಸಡಗರದ ಹಲವು ಗೌರವ ಪ್ರಶಸ್ತಿಗಳು

ಪುರಸ್ಕಾರಕ್ಕೆ ಭಾಜನರಾಗಿರುವ ತಮ್ಮ ನಾಡಗುಡಿಯ

ಸೇವೆಗೆ ಅನಂತ ಅನಂತ ಧನ್ಯವಾದಗಳು ಅರ್ಪಿಸುವೆವು 


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


 

No comments:

Post a Comment

Videos