Tuesday, October 13, 2020

ಸ್ವರಚಿತ ಕವನ ೧೩/೧೦/೨೦೨೦

 ಕವನದ ಶೀರ್ಷಿಕೆ

*"ಹೆಣ್ತನದ ಸಾರ್ಥಕತೆ"*


ಗರ್ಭದಲಿ ಮಗುವಿನ ಕುರುಹು 

ಮೂಡಿದ್ದು ಗೊತ್ತಾದ ದಿನದಿಂದ 

ತಾಯಿ ಎಂಬ ದೇವತೆಗೆ ಆದ ಖುಷಿ 

ಅಷ್ಟಿಷ್ಟಲ್ಲ ಅದಕೆ ಸಾಟಿ ಎಂಬುದಿಲ್ಲ


ಆ ಮಗುವಿನ ಕಲ್ಪನೆಗಳ ಮೂಟೆ

ಹೊತ್ತು ಸಾಗುತಲಿರುವಳು ಅನುದಿನ

ಮಗುವಿಗೆ ಸ್ವಲ್ಪವೂ ಕಷ್ಟವಾಗದಂತೆ

ಪೊರೆವಳು ಸದಾ ಉಸಿರಲಿ ಉಸಿರಾಗಿ 


ನವಮಾಸ ತುಂಬುವ ದಿನಗಣನೆ

ಮಾಡುತ ಜನಿಸುವ ಮಗುವನು

ಸರಾಗವಾಗಿ ಅಡ್ಡಿಆತಂಕಗಳಾಗದೆ

ಹೆರಲೆಂದು ಬೇಡುವಳು ದೇವರಿಗೆ


ಬಾಣಂತನ ಬೇನೆಗಳ ಸಹಿಸಿಕೊಂಡು

ಮಗುವಿನ ಮುಖ ನೋಡಲು ನೋವೆಲ್ಲಾ

ಮಂಗಮಾಯವಾಗಿ ಸಂತಸ ಒಡಮೂಡಿ

 ಹೆಣ್ತನದ ಸಾರ್ಥಕತೆಗೆ ಆತೊರೆದ ಆಕ್ಷಣಕೆ


ಮಗುವು ಹೆತ್ತ ಮಡಿಲಲಿ ಆಟವಾಡಿ

ತಂದೆ ತಾಯಿಯ ಮನೆಮಂದಿಯೆಲ್ಲ

ಹೆಗಲಲ್ಲಿ ಹೊತ್ತು ಮರೆವರು ಶಿಶುವಿನ

ಬಾಲ ಲೀಲೆಗಳನು ನೋಡುತ ಸಂತಸದಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ






No comments:

Post a Comment

Videos