ಕವನದ ಶೀರ್ಷಿಕೆ
*ಆತ್ಮವಿಶ್ವಾಸ*
ನಮಗೆ ಗೆಲುವು ಸಿಗಬೇಕಾದರೆ ಮೊದಲು
ಆತ್ಮವಿಶ್ವಾಸ ಇದ್ದರೆ ಅರ್ಧ ಗೆದ್ದಂತೆ ಸರಿ
ಹಿಡಿದ ಕೆಲಸವನ್ನು ಬಿಡದೆ ಸಾಧಿಸಲು
ಮುಖ್ಯವಾಗಿ ಛಲ ದೃಢ ನಿರ್ಧಾರ ಬೇಕು
ನೂರಾರು ಪ್ರಯತ್ನ ಮಾಡಿ ಕೊನೆಗೆ ಒಂದು
ದಿನ ಜಯ ನಮ್ಮದಾಗಲು ನೋಡುವರು
ಎಲ್ಲರೂ ನಮ್ಮೆಡೆಗೆ ಎಡೆಬಿಡದೆ ದುಡಿಮೆಯ
ಕಷ್ಟಗಳ ಸುರಿಮಳೆಯೇ ಲೆಕ್ಕಕ್ಕೆ ಬಾರದು ಆಗ
ಕಾಯಕದಲ್ಲಿ ಮೇಲು ಕೀಳೆನ್ನದೆ ನಿಷ್ಠೆಯಿಂದ
ದುಡಿದರೆ ಒಂದಲ್ಲಾ ಒಂದು ದಿನ ತಾನಾಗಿಯೇ
ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇರಲಿ
ಮನದಲಿ ಗೆದ್ದು ಬೀಗುವ ಅವಕಾಶ ನಮ್ಮದು
ಜಗತ್ತಿನಲ್ಲಿ ಎಲ್ಲವೂ ಅಸಾಧ್ಯವೇ ಸಾಧಿಸಿದ
ಮೇಲೆ ಇಷ್ಟೆನಾ ಎಂಬ ಭಾವನೆ ಮೂಡುತ್ತದೆ
ಅದಕ್ಕೆ ಹೊಸತನ್ನು ಆಲೋಚಿಸುವ ಜನರಿಗೆ
ಉಪಯೋಗಕ್ಕೆ ಬರುವದನು ಶೋಧಿಸೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
✍️✍️
*ಕವಿತಾ ಸಪ್ತಾಹ*
*೧೯೪ನೇ ಗೋಷ್ಠಿ*
*ದಿನಾಂಕ- ೧೯.೧೦.೨೦೨೦*
*ವಾರ-ಸೋಮವಾರ*
*ನಿರ್ವಹಣೆ *-ಶ್ರೀ ಚನ್ನಬಸವಯ್ಯ ವಿ ಪೂಜೇರ**
*ವಿಷಯ- *ಆತ್ಮವಿಸ್ವಾಸ*
*ಸೂಚನೆಗಳು*
👉🏻 *ಕವಿತೆ ೧೬ ರಿಂದ ೨೦ ಸಾಲಿರಲಿ*
👉🏻 *ಸಮಯ ಮುಂಜಾನೆ ೮ ಘಂಟೆಯಿಂದ ಸಂಜೆ ೫ ಘಂಟೆಯವರೆಗೆ*
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
✍🏻✍🏻✍🏻✍🏻✍🏻
💐💐💐💐💐
🙏🏻🙏🏻🙏🏻🙏🏻🙏🏻 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment